ಪ್ರಜಾಸ್ತ್ರ ಸುದ್ದಿ
ತುಮಕೂರು: ಯಾರಾದ್ರೂ ಬಂದು ಕೆಲಸ ಕೊಡಿಸ್ತೀವಿ ಅಂದ್ರೆ ಸಾಕು ಕೆಲ ನಿರುದ್ಯೋಗಿಗಳು ಹಿಂದುಮುಂದು ನೋಡದೆ ನಂಬಿ ಬಿಡ್ತಾರೆ. ಹೀಗೆ ನಂಬಿದ್ದಕ್ಕೆ ನಾಲ್ಕಾರು ಜನ ಮೋಸ ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸ್ತಿದ್ದ ಸೌಮ್ಯ ಅಲಿಯಾಸ್ ಲಾವಣ್ಯಗೌಡ(33) ಎಂಬಾಕೆಯನ್ನ ಬಂಧಿಸಲಾಗಿದೆ.
ಈಕೆ ನಿರುದ್ಯೋಗಿಗಳನ್ನ ಟಾರ್ಗೆಟ್ ಮಾಡಿಕೊಂಡು, ಅವರಿಗೆ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ವಿಭಾಗೀಯ ಅಧಿಕಾರಿ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಗೂಗಲ್ ಪೇ, ಫೋನ್ ಪೇ ಮೂಲಕ 4.5 ಲಕ್ಷ ರೂಪಾಯಿ ಹಾಗೂ ಮಾರ್ಕ್ಸ್ ಕಾರ್ಡ್ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.
ರಾಜೇಶ, ಸಂದೀಪಕುಮಾರ, ರಶ್ಮಿ ಹಾಗೂ ತಿಮ್ಮರಾಜು ಅನ್ನೋ ಸೌಮ್ಯ ಅಲಿಯಾಸ್ ಲಾವಣ್ಯಗೌಡ ಮೋಸ ಮಾಡಿದ್ದಾಳೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ವಂಚಕಿಯನ್ನ ಬಂಧಿಸಲಾಗಿದೆ.