ಬಿಎಸ್ವೈ ಪರ ಹೆಚ್ಡಿಕೆ ಬ್ಯಾಟಿಂಗ್: ಏನ್ ಇದರ ಹಿಂದಿನ ಗುಟ್ಟು?

373

ಮೈಸೂರು: ಸಿಎಂ ಬಿ.ಎಸ್ ಯಡಿಯೂರಪ್ಪನವರ ಕೆಲಸದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಗಳಿದ್ದಾರೆ. ಸಿಎಂ ಅವರ ಪ್ರವಾಹ ಕೆಲಸದ ಬಗ್ಗೆ ಕೊಂಡಾಡಿರುವ ಹೆಚ್ಡಿಕೆ, ಮಧ್ಯಂತರ ಚುನಾವಣೆ ಬಯಸುವುದಿಲ್ಲ ಅಂತಾ ಹೇಳಿದ್ದಾರೆ.

ಇನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನಗೊಳ್ಳುವುದಿಲ್ಲ ಅಂತಾ ಮಾಜಿ ಸಿಎಂ ಹೆಚ್ಡಿಕೆ ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಾಜಿ ಸಿಎಂ ಏಕಾಏಕಿ ಯಾಕೆ ಈ ರೀತಿ ಹೇಳಿದ್ರು. ಏನು ಇದರ ಹಿಂದಿನ ಉದ್ದೇಶ ಎಂದು ಮಾತ್ನಾಡಿಕೊಳ್ತಿದ್ದಾರೆ.

ಇತ್ತ ಕಾಂಗ್ರೆಸ್ ನವರು ಬಿಜೆಪಿ ಸರ್ಕಾರ ಪತನಗೊಳ್ಳಲಿದೆ ಅಂತಾ ಹೇಳ್ತಿದ್ದಾರೆ. ಹೆಚ್ಡಿಕೆ ಹೇಳಿಕೆ ಬಗ್ಗೆ ಕಾಂಗ್ರೆಸ್ ನವರು ಪ್ರತಿಕ್ರಿಯೆ ನೀಡ್ತಿಲ್ಲ. ಕುಮಾರಸ್ವಾಮಿ ರಾಜಕೀಯ ಲೆಕ್ಕಾಚಾರ ಇಟ್ಕೊಂಡು ಮತ್ನಾಡ್ತಿದ್ದಾರೆ ಅಂತಾ ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!