ರಾಮನಗರ: ನಿಮಗೆ ಗಿಫ್ಟ್ ಆಫರ್ ಬಂದಿದೆ ಎಂದು ಯಾರಾದ್ರೂ ಕಾಲ್ ಮಾಡಿದ್ರೆ ಎಚ್ಚರಿಕೆಯಿಂದ ಇರ್ರಿ. ಯಾಕಂದ್ರೆ ಇವನ ರೀತಿ ಮೋಸ ಮಾಡಲು ಕಾಯ್ತಿದ್ದಾರೆ. ಗಿಫ್ಟ್ ಬಂದಿದೆ ಅಂತಾ ಹೇಳಿ ಮೋಸ ಮಾಡ್ತಿದ್ದವನನ್ನ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸ್ರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಐವಾರ ಗ್ರಾಮದ ಸತೀಶ ಬಂಧಿತ ಆಸಾಮಿ. ನಮ್ಮ ಡೇಟಾ ಬೇಸ್ ನಲ್ಲಿ ಮೊಬೈಲ್ ನಂಬರ್ ಪೈಕಿ ನಿಮ್ಮ ನಂಬರ್ ಲಕ್ಕಿ ಡ್ರಾನಲ್ಲಿ ಬಂದಿದೆ. ನಿಮ್ಗೆ ಗಿಫ್ಟ್ ಬಂದಿದೆ. ಹಣ ಕಟ್ಟಿ ತೆಗೆದುಕೊಳ್ಳಿ ಎಂದು ಮಹಿಳಾ ಟೆಲಿಕಾಲರ್ ಮೂಲಕ ಕಾಲ್ ಮಾಡ್ತಿದ್ದ. ಮೈಸೂರು ಹಾಗೂ ಕೋಲಾರದಲ್ಲಿ ಕಾಲ್ ಸೆಂಟರ್ ತೆರೆದಿರುವ ಈತ ಮಹಿಳಾ ಟೆಲಿಕಾಲರ್ ಮೂಲಕ ಫೋನ್ ಮಾಡಿಸ್ತಿದ್ದ. ಬಳಿಕ ತರಕಾರಿ ಕಟರ್ ಕೊಟ್ಟು ಕಳಿಸ್ತಿದ್ದ.
ಬಂಧಿತ ಆರೋಪಿಯಿಂದ 27 ಮೊಬೈಲ್, ಲಾಪ್ ಟಾಪ್, ಕಂಪ್ಯೂಟರ್, ಪ್ರಿಂಟರ್, 130 ತರಕಾರಿ ಕಟರ್ ಸೇರಿದಂತೆ ಇತರೆ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚೆನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸ್ರು ವಿಚಾರಣೆ ನಡೆಸಿದ್ದಾರೆ.