ಆಡಿಯೋ ಕೇಸ್ ರಾಷ್ಟ್ರಪತಿಗೆ ಮನವಿ: ಸಿದ್ದರಾಮಯ್ಯ

408

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಡಿಯೋ ಕುರಿತು ರಾಷ್ಟ್ರಪತಿಗೆ ಮನವಿ ಮಾಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತ್ನಾಡಿದ ಮಾಜಿ ಸಿಎಂ, ಕೇಂದ್ರ ಗೃಹ ಸಚಿವ ಹಾಗು ಸಿಎಂ ಸೇರಿಕೊಂಡು ಕುದುರೆ ವ್ಯಾಪಾರ ಮಾಡಿದ್ದಾರೆ. ಈ ಸಂವಿಧಾನ ವಿರೋಧಿ ನಡೆಯನ್ನ ರಾಷ್ಟ್ರಪತಿ ಗಮನಕ್ಕೆ ತರುತ್ತೇವೆ. ಆಪರೇಷನ್ ಕಮಲದ ಬಗ್ಗೆ ಮನವಿ ಸಲ್ಲಿಸಲು ಮುಂದಾಗಿರುವುದಾಗಿ ಹೇಳಿದ್ದಾರೆ.

ದೇವದುರ್ಗದ ಐಬಿಯಲ್ಲಿ ಮಾತ್ನಾಡಿರುವ ಸಿದ್ದರಾಮಯ್ಯ, ಸಿಎಂ ಅವರು ಆಡಿಯೋದಲ್ಲಿರುವ ಧ್ವನಿ ತಮ್ಮದೆ ಎಂದು ಒಪ್ಪಿಕೊಂಡಿದ್ದಾರೆ. ಇಲ್ಲಿ ಸಂವಿಧಾನ ಉಲ್ಲಂಘನೆಯಾಗಿಸಲಾಗಿದೆ. ಕೇಂದ್ರ ಗೃಹ ಸಚಿವ ಹಾಗೂ ಸಿಎಂ ಸಂವಿಧಾನ ಬಾಹಿರ ಚಟುವಟಿಕೆ ನಡೆಸಿರುವುದು ನಾಚಿಕೆ ಸಂಗತಿ. ಆಪರೇಷನ್ ಕಮಲ ಕುರಿತು ಮನವಿ ಮಾಡುತ್ತೇವೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!