ಪ್ರಜಾಸ್ತ್ರ ಸಿನಿಮಾ ಡೆಸ್ಕ್
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತಗೆ ಕೇಂದ್ರ ಸರ್ಕಾರ ಶುಕ್ರವಾರ, ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿದೆ. ಈ ಮೂಲಕ ಫಾಲ್ಕೆ ಪ್ರಶಸ್ತಿ ಪಡೆದ 51ನೇ ಸಾಧಕನಾದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ರಜನಿಗೆ ಶುಭ ಕೋರಿದ್ದಾರೆ. ಅದೆ ರೀತಿ ಹಿರಿಯ ನಟ ರಜನಿಕಾಂತ, ಪ್ರಧಾನಿ ಮೋದಿಗೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.
ಇದೀಗ ಈ ಪ್ರಶಸ್ತಿ ಘೋಷಣೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹೌದು, ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಪ್ರಶಸ್ತಿ ಘೋಷಿಸಿದರ ಹಿಂದಿನ ಉದ್ದೇಶ ಸಂಪೂರ್ಣವಾಗಿ ರಾಜಕೀಯದಿಂದ ಕೂಡಿದೆ ಎಂದು ತೀವ್ರ ಚರ್ಚೆಗಳು ನಡೆಯುತ್ತಿವೆ.
ಈ ಹಿಂದೆ ನಟ ರಜನಿಕಾಂತ ಸಹ ರಾಜಕೀಯ ಪಕ್ಷ ಸ್ಥಾಪನೆ ಮಾಡುತ್ತೇನೆ. ರಾಜಕೀಯ ಎಂಟ್ರಿ ಕೊಡುತ್ತೇನೆ ಎಂದಿದ್ದರು. ಬಳಿಕ ಅನಾರೋಗ್ಯದ ಕಾರಣಕ್ಕೆ ಹಿಂದೆ ಸರೆದರು. ಆದ್ರೆ, ಮೋದಿ ಬಗ್ಗೆ ರಜನಿಗೆ ಸಾಫ್ಟ್ ಕಾರ್ನರ್ ಇದೆ. ಹೀಗಾಗಿಯೇ ಅವರು ತಮ್ಮನ್ನು ಬೆಳೆಸಿದ ಜನರಿಗೆ ಮೊದಲು ಧನ್ಯವಾದಗಳನ್ನು ಸಲ್ಲಿಸದೆ ಮೋದಿಗೆ ತಿಳಿಸಿದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿವೆ. ಮೇಲಾಗಿ ತಮಿಳುನಾಡಿನಲ್ಲಿ ಬಿಜೆಪಿ ಗೆಲುವಿಗೆ ಪ್ರಶಸ್ತಿ ಪಾಲಿಟಿಕ್ಸ್ ಎನ್ನಲಾಗ್ತಿದೆ. ಆದ್ರೆ, ಇದು ಎಷ್ಟೊಂದು ವರ್ಕೌಟ್ ಆಗುತ್ತೆ ಅನ್ನೋದು ಮುಂದೆ ತಿಳಿಯಲಿದೆ.