ಮಂಡ್ಯ: ನಿನ್ನೆ ಸಂಜೆ 4ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಮೊದಲ ಬಾರಿಗೆ ಹುಟ್ಟೂರಿಗೆ ಬಂದ ಸಿಎಂ ಬಿ.ಎಸ್ ಯಡಿಯೂರಪ್ಪನವರು ಖುಷಿಯನ್ನ ಹಂಚಿಕೊಂಡ್ರು. ಈ ವೇಳೆ ಮಾತ್ನಾಡಿದ ಅವರು, ನನ್ನೂರಿಗೆ ಬರೋದು ಖುಷಿಯ ಸಂಗತಿ. ಇಲ್ಲಿನ ಅಭಿವೃದ್ಧಿ ಯೋಚಿಸುವುದು ನನ್ನ ಕರ್ತವ್ಯವೆಂದು ಬಿಎಸ್ವೈ ಹೇಳಿದ್ದಾರೆ.
ಬಿ.ಎಸ್ ಯಡಿಯೂರಪ್ಪನವರ ಹುಟ್ಟೂರಾದ ಕೆ.ಆರ್ ಪೇಟೆ ತಾಲೂಕಿನ ಬೂಕನಕೆರೆಗೆ ಭೇಟಿ ನೀಡಿದ ಟೈಂನಲ್ಲಿ ಮಾಧ್ಯಮದವರೊಂದಿಗೆ ಮಾತ್ನಾಡಿದ ಅವರು, ನನ್ನ ಹುಟ್ಟೂರು ಬೂಕನಕೆರೆ ಮನೆಗೆ ಹೋಗುವೆ. ಬಳಿ ಗವಿ ಸಿದ್ಧಲಿಂಗೇಶ್ವರ ಸ್ವಾಮೀಜಿಗೆ ಪೂಜೆ ಸಲ್ಲಿಸುವೆ. ನಂತರ ಮೇಲುಕೋಟೆಗೆ ಹೋಗಿ ದೇವರ ದರ್ಶನ ಪಡೆದು ಮರಳಿ ಬೆಂಗಳೂರಿಗೆ ಹೊರಡುವೆ ಅಂತಾ ತಮ್ಮ ಈ ದಿನದ ದಿನಚರಿ ಬಗ್ಗೆ ಹೇಳಿದ್ರು.
ಹುಟ್ಟೂರಿಗೆ ಆಗಮಿಸಿದ ಸಿಎಂ ಅವರನ್ನ ಊರಿನ ಜನತೆ ಅದ್ಧೂರಿಯಾಗಿ ಸ್ವಾಗತಿಸಿದ್ರು. ತಮ್ಮ ಊರಿನ ಮಗನ ಬಗ್ಗೆ ಎಲ್ಲರೂ ಕೊಂಡಾಡಿದ್ರು. ಈ ವೇಳೆ ಬಿಎಸ್ವೈ ಪುತ್ರ ಬಿ.ವೈ ರಾಘವೇಂದ್ರ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಸೇರಿ ಅನೇಕರು ಸಾಥ್ ನೀಡಿದ್ರು.