ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರೋದು ಖುಷಿಯ ಸಂಗತಿ ಅಂತಾ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ್ನಾಡಿದ ರಮೇಶ ಜಿಗಜಿಣಗಿ, ರಾಜ್ಯದಲ್ಲಿ ಬಿಜೆಪಿ ಆರು ತಿಂಗಳು ಇರುತ್ತೆ ಅಂತಾ ಹೇಳ್ತಿದ್ದಾರೆ. ವಿರೋಧ ಪಕ್ಷದವರಿಗೆ ಮಾತ್ನಾಡುವ ಚಟವಿದೆ ಅಂತಾ ಹೇಳಿದ್ರು.
ಇನ್ನು ಸಚಿವ ಸಂಪುಟ ರಚನೆಯ ವಿಚಾರ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ನಾನು ಯಾರ ಪರವೂ ಲಾಬಿ ಮಾಡುವುದಿಲ್ಲ. ಅಲ್ದೇ ನಾನೊಬ್ಬ ಸಾಮಾನ್ಯ ಕಾರ್ಯಕರ್ತವೆಂದು ಹೇಳಿದ್ರು.