ಪ್ರಜಾಸ್ತ್ರ ಸುದ್ದಿ
ಕೊಲ್ಹಾರ: ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನಲ್ಲಿ ಭೂಕಂಪನದ ಅನುಭವ ಆಗಿದೆ. ಇದರಿಂದಾಗಿ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ತಾಲೂಕಿನ ಮಸೂತಿ, ಮಲಘಾ ಹಾಗೂ ಕೂಡಗಿ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿದೆ.
ಮೊದಲು ಭಾರಿ ಸ್ಫೋಟಕದ ಸದ್ದು ಕೇಳಿಸಿದೆ. ಬಳಿಕ ಭೂಮಿ ಕಂಪಿಸಿದೆ. ಇದ್ರಿಂದಾಗಿ ಮನೆಯಲ್ಲಿದ್ದ ಜನರು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಆದ್ರೆ, ಕೆಲವರು ಇದು ಕಡಿ ಗಣಿಗಾರಿಕೆಯಿಂದಾಗಿ ಈ ರೀತಿ ಆಗ್ತಿದೆ ಅಂತಿದ್ದಾರೆ.
ಈ ಭಾಗದಲ್ಲಿ ಕಡಿ ಗಣಿಗಾರಿಕೆ ನಡೆಯುತ್ತಿದ್ದು, ಬೃಹತ್ ಕಲ್ಲನ್ನ ಸ್ಫೋಟಿಸಿದಾಗ ಭಾರಿ ಸದ್ದು ಹಾಗೂ ಭೂಮಿಕಂಪಿಸಿದ ಅನುಭವ ಆಗುತ್ತೆ ಎಂದು ಹೇಳ್ತಿದ್ದಾರೆ. ಆದ್ರೆ, ಭೂಮಿ ಕಂಪಿಸಿದಕ್ಕೆ ನಿಖರ ಮಾಹಿತಿ ಇಲ್ಲ. ಸ್ಥಳಕ್ಕೆ ಭೂ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.