ಸಿಎಂ ಬದಲಾವಣೆ ಪರೀಕ್ಷೆ ಬರೆದಿದ್ದೇವೆ: ಸಚಿವ ಸಿಪಿವೈ

615

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕಕ್ಕೆ ಮೂರು ದಿನಗಳ ಕಾಲ ಬಂದು ಹೋದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಅವರು, ಏನು ಸಂದೇಶ ನೀಡಿದ್ರೋ, ಏನು ಮಾಹಿತಿ ಪಡೆದುಕೊಂಡು ಹೋದ್ರೋ ಗೊತ್ತಿಲ್ಲ. ಒಟ್ಟಿನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮಾತ್ರ ನಿಂತಿಲ್ಲ.

ಈ ಬಗ್ಗೆ ಮಾತ್ನಾಡಿರುವ ಸಚಿವ ಸಿ.ಪಿ ಯೋಗೇಶ್ವರ, ಮುಖ್ಯಮಂತ್ರಿ ಬದಲಾವಣೆ ಸಂಬಂಧ ಪರೀಕ್ಷೆ ಬರೆದಿದ್ದೇವೆ. ಶೀಘ್ರದಲ್ಲಿ ಉತ್ತರ ಬರಲಿದೆ ಎಂದು ಹೇಳುವ ಮೂಲಕ, ಸಿಎಂ ಯಡಿಯೂರಪ್ಪ ವಿರುದ್ಧ ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುತ್ತೆ ಮಾಡಿದ್ದಾರೆ.

ನನ್ನ ವೈಯಕ್ತಿಕ ಸಮಸ್ಯೆ, ಸರ್ಕಾರ ಹಾಗೂ ಬಿಜೆಪಿಯ ಮೂಲಭೂತ ಸಮಸ್ಯೆಗಳ ಕುರಿತು ಹೈಕಮಾಂಡ್ ಗೆ ವಿವರ ನೀಡಿದ್ದೇನೆ. ಒಬ್ಬ ಸಚಿವನಾಗಿ ನನ್ನ ಜವಾಬ್ದಾರಿ ನಾನು ನಿರ್ವಹಿಸ್ತಿದ್ದೇನೆ. ಹೀಗಾಗಿ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದೆಂದು ನಾಲ್ಕು ಗೋಡೆಗಳ ಮಧ್ಯೆ ವಿವರ ನೀಡಿದ್ದೇನೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!