ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ಎಂಎಲ್ಸಿ ಸಿ.ಪಿ ಯೋಗೇಶ್ವರ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿರುವ ಆಡಿಯೋ ನನ್ನದಲ್ಲ ಎಂದಿದ್ದಾರೆ. ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಅದು ಫೇಕ್ ಆಡಿಯೋ ಅಂತಾ ಹೇಳಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರ ಭೇಟಿ ಬಳಿಕ ಮಾತನಾಡಿದ ಅವರು, ಕುಮಾರಸ್ವಾಮಿ ನಮ್ಮ ತಾಲೂಕಿನಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ನಾನು ಕೆಲಸ ಮಾಡುತ್ತಿದ್ದೇನೆ. ಜನರು ನನ್ನ ಕೈ ಹಿಡಿಯುವ ವಿಶ್ವಾಸವಿದೆ. ಈ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ.
ಮೇ ತಿಂಗಳಲ್ಲಿ ನಮ್ಮದೆ ಸರ್ಕಾರ ಬರುತ್ತೆ. ಆಗ ಅಭಿಮಾನದಿಂದ ಸಚಿವ ಸ್ಥಾನ ನೀಡಿ ಎಂದು ಕೇಳುತ್ತೇನೆ. ಈಗ ನಾನು ಸೋತಿದೀನಿ. ಸಚಿವ ಸ್ಥಾನ ನೀಡಿ ಎಂದು ಹೇಗೆ ಕೇಳಲಿ ಎಂದರು. ಬಿಜೆಪಿ ಸ್ವಂತ ಬಲದ ಮೇಲೆ ಬರಲ್ಲ. ಅಮಿತ್ ಶಾ ಒಂಥರಾ ರೌಡಿಸಂ ಎಂದು ಸಿ.ಪಿ ಯೋಗೇಶ್ವರ ಹೇಳಿದ್ದಾರೆ ಅನ್ನೋ ಆಡಿಯೋ ವೈರಲ್ ಆಗಿದೆ. ಈ ಕುರಿತು ಮಾಧ್ಯಮದವರಿಗೆ ಹೀಗೆ ಉತ್ತರಿಸಿದರು.