ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಮನಗರದ ರಾಜಕೀಯ ನಾಯಕರ ಜಗಳ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಮಾಜಿ ಸಿಎಂ ಕುಮಾರಸ್ವಾಮಿಗೆ ಮೆಚ್ಯೂರಿಟಿ ಇಲ್ಲ ಎಂದಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಅಪ್ರಬುದ್ಧರು ಎಂದಿದ್ದಾರೆ.
ಕಲಾವಿದರ ಕೋಟಾದಲ್ಲಿ ಆಯ್ಕೆಯಾದವರಿಗೆ 50 ಕೋಟಿ ರೂಪಾಯಿ ಅನುದಾನ ಕೊಟ್ಟ ಉದಾಹರಣೆ ಎಲ್ಲಿಯಾದರೂ ಇದೆಯಾ? ಯಾವ ಕಾರಣಕ್ಕೆ ಕೊಟ್ಟರು ಅನ್ನೋದು ಸ್ಪಷ್ಟಪಡಿಸಲಿ. ನಾನು ಇದನ್ನು ಇಷ್ಟಕ್ಕೆ ಬಿಡುವುದಿಲ್ಲ.
ವಿಧಾನ ಪರಿಷತ್ ಸಿ.ಪಿ ಯೋಗೇಶ್ವರ್ ಕಾರಿನ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು, ಮೊಟ್ಟೆ ಎಸೆದ ಪ್ರಕರಣದ ಬಗ್ಗೆ ಮಾತನಾಡಿದ್ದ ಸಿಎಂ, ನಾವೆಲ್ಲರೂ ಮೆಚ್ಯೂರ್ಡ್ ಆಗಿದ್ದೇವೆ. ಕುಮಾರಸ್ವಾಮಿಗೆ ಮೆಚ್ಯೂರಿಟಿ ಇಲ್ಲ ಎಂದಿದ್ದರು.