ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ
ಬ್ಯಾಂಕಾಕ್: ಇಲ್ಲಿನ ಥಾಯ್ಲೆಂಡ್ ಪ್ರಿ ಸ್ಕೂಲ್ ಡೇ ಕೇರ್ ಸೆಂಟರ್ ನಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, 22 ಅಮಾಯಕ ಮಕ್ಕಳು ಸೇರಿ 38 ಜನರು ಮೃತಪಟ್ಟ ಭೀಕರ ಘಟನೆ ನಡೆದಿದೆ. ಮಾಜಿ ಪೊಲೀಸ್ ಅಧಿಕಾರಿ ಬಂದೂಕು ಹಾಗೂ ಚಾಕುವಿನಿಂದ ನರಮೇಧ ನಡೆಸಿದ್ದಾನೆ.
ನಾಂಗ್ ಬುವಾ ಲ್ಯಾಂಫು ಪ್ರದೇಶದಲ್ಲಿ ನಡೆದ ಈ ಕೃತ್ಯಕ್ಕೆ ಕಾರಣವೇನು ಅನ್ನೋದು ತಿಳಿದಿಲ್ಲ. ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ್ದಾನೆ. ಪನ್ಯಾ ಕಾಮ್ರಾಬ್ ಎಂಬಾತ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಹಂತಕ ತನ್ನ ಕುಟುಂಬವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.