ಪ್ರಜಾಸ್ತ್ರ ಸುದ್ದಿ
ಧಾರವಾಡ: ಇಲ್ಲಿನ ವಿಜಯನಗರದಲ್ಲಿ ಶ್ವಾನಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ಮಧ್ಯ ಹೋರಾಟ ನಡೆಸುತ್ತಿದ್ದ ಕೋತಿಗೆ ಸ್ಥಳೀಯರು ಚಿಕಿತ್ಸೆ ಕೊಡಿಸಿದ್ದಾರೆ. ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ತೋರಿದರು.
ಮಂಗಳವಾರ ರಾತ್ರಿ ಶ್ವಾನಗಳ ದಾಳಿಗೆ ಸಿಲುಕಿಕೊಂಡ ಕೋತಿಗೆ ಎರಡು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ನೋವಿನಿಂದ ನಿತ್ರಾಣಗೊಂಡ ಕೋತಿಯೂ, ವಿಜಯನಗರದ ಮನೆಯೊಂದರ ಗೇಟ್ ನಲ್ಲಿ ಮಲಗಿಕೊಂಡಿತ್ತು. ಅದನ್ನು ತಿಳಿದ ಮನೆಯ ಮಾಲೀಕರು ಹಾಗೂ ಅಲ್ಲಿನ ವಿದ್ಯಾರ್ಥಿಗಳು ಚಿಕಿತ್ಸೆ ಕೊಡಿಸಿದ್ದಾರೆ.
ಪಶುವೈದ್ಯರಾದ ಡಾ.ಸಜ್ಜನ್ ಅವರು ಕೋತಿಯನ್ನು ತಪಾಸಣೆ ನಡೆಸಿ, ಸಲಾಯಿನ್ ಹಾಕಿದರು. ಕೋತಿಯೂ ಸದ್ಯ ಚೇತರಿಸಿಕೊಳ್ಳುತ್ತಿದೆ ಎಂದು ಅಲ್ಲಿನ ನಿವಾಸಿ ಉಮೇಶ ಇಟ್ನಾಳ ಮಾಹಿತಿ ನೀಡಿದ್ದಾರೆ.