ಸುಂಕ ನೆಪದಲ್ಲಿ ಸಾರ್ವಜನಿಕರ ಜೇಬಿಗೆ ಕೈ ಹಾಕಿದ ಮೋದಿ

305

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಇಳಿಕೆ ಕಂಡಿದ್ದಕ್ಕಿಂತ ಏರಿಕೆ ಕಂಡಿದ್ದೆ ಹೆಚ್ಚು ಅನ್ನೋದು ತಿಳಿದು ಬರ್ತಿದೆ. ಬೆಲೆ ಏರಿಕೆಯಿಂದ ಮೊದಲೇ ಹೈರಾಣಾಗಿ ಹೋಗಿರುವ ಜನರಿಗೆ ಮೋದಿ ಸರ್ಕಾರ ಮತ್ತಷ್ಟು ಕುಗ್ಗಿಸುವ ಕೆಲಸ ಮಾಡುತ್ತಿದೆ.

ಈಗಾಗ್ಲೇ ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ಸಿಲಿಂಡರ್ ಬೆಲೆ ದುಪ್ಪಟ್ಟವಾಗಿದೆ. ಇದ್ರಿಂದಾಗಿ ಸಾಮಾನ್ಯ ಜನರು ಒದ್ದಾಡ್ತಿದ್ದಾರೆ. ಇದರ ನಡುವೆ ಕೃಷಿ ಬೆಳೆಗಳು, ಇತರೆ ಪದಾರ್ಥಗಳ ಸೆಸ್ ನೆನಪದ ಮೂಲಕ ಜನರ ಜೇಬಿಗೆ ನೇರವಾಗಿ ಹಾಕಲಾಗ್ತಿದೆ. ಹುರಿಗಡಲೆ, ಸೂರ್ಯಕಾಂತಿ, ಹತ್ತಿ, ಸೇಬು, ಕಾಬೂಲ್ ಕಡಲೆ ಬೆಲೆ ಏರಿಕೆಯಾಗಿದೆ. ಶತಕದ ಸನಿಹ ಬಂದು ನಿಂತಿರುವ ಪೆಟ್ರೋಲ್ 2.5 ರೂಪಾಯಿ ಹೆಚ್ಚಳ. ಡಿಸೇಲ್ 4 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಮೊಬೈಲ್, ಮೊಬೈಲ್ ಚಾರ್ಜರ್, ಟಿವಿ, ಫ್ರಿಡ್ಜ್, ಸೋಲಾರ್, ಬಟ್ಟೆ, ಅಡುಗೆ ಎಣ್ಣೆ, ವಾಹನದ ಬಿಡಿ ಭಾಗಗಳು ಸಹ ದುಬಾರಿ ಆಗಿವೆ. ಆಮದು ಸುಂಕದ ಮೂಲಕ ಇವುಗಳ ಬೆಲೆ ಏರಿಕೆ ಮಾಡಲಾಗಿದೆ. ಇನ್ನು ಅಲ್ಕೋಹಾಲ್ ಮೇಲೆ ಶೇಕಡ 100ರಷ್ಟು ತೆರಿಗೆ ಹೆಚ್ಚಿಸಲಾಗಿದೆ. ಸ್ಟೀಲ್, ಕಬ್ಬಿಣ, ತಾಮ್ರದ ವಸ್ತುಗಳು, ಶೂ, ವಿಮೆಗಳಲ್ಲಿ ಇಳಿಕೆ ಮಾಡಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!