ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಆಪ್ತರೆನ್ನಲಾದ ಉಮೇಶ ಹಾಗೂ ಬಿನ್ನಿ ಎಂಬುವರು ಮೂರು ದಿನಗಳ ಹಿಂದೆ ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಗುತ್ತಿಗೆದಾರರ ಸಭೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಹೊಸ ಸರ್ಕಾರ ರಚನೆಯಾದ್ಮೇಲೆ ಗುತ್ತಿಗೆದಾರರ ಬದಲಾವಣೆಯ ಚಿಂತನೆ ನಡೆದಿದೆ. ನೀವು ನಾವು ಹೇಳಿದಂತೆ ಕೇಳಿದ್ರೆ ನಿಮ್ಗೆ ಗುತ್ತಿಗೆ ಸಿಗುತ್ತೆ ಎಂದು ಹೇಳಿದ್ದಾರಂತೆ. ಇದರ ನಡುವೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು, ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಬಿಲ್ಡರ್ ಗಳ ಸಭೆ ನಡೆಸಿ 100 ಕೋಟಿ ಬೇಡಿಕೆ ಇಟ್ಟಿದ್ದಾರೆ ಅನ್ನೋ ಆರೋಪ ಮಾಡಿದ್ದಾರೆ.
ಶಾಸಕರನ್ನ ಖರೀದಿ ಮಾಡಲು ಖರ್ಚು ಮಾಡಿರುವ ಹಣವನ್ನ ಇವರಿಂದ ವಸೂಲಿ ಶುರು ಮಾಡಿದ್ದಾರೆ ಅಂತಾ ಹೇಳಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ವರ್ಗಾವಣೆಯಲ್ಲೂ ಹಣ ಲೂಟಿ ಮಾಡಲಾಗ್ತಿದೆ ಅಂತಾ ಆರೋಪಿಸಿದ್ದಾರೆ.