ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಮೂವರು ಉಗ್ರರನ್ನ ಉಡೀಸ್ ಮಾಡಲಾಗಿದೆ. ಈ ವೇಳೆ ಯೋಧರೊಬ್ಬರಿಗೆ ಗಾಯವಾಗಿದೆ.
ಪಜಲ್ ಪುರದಲ್ಲಿ ಉಗ್ರರು ಅಡಗಿರುವ ಮಾಹಿತಿ ಪಡೆದ ಯೋಧರು, ಉಗ್ರರ ಮೇಲೆ ಗುಂಡಿನ ದಾಳೆ ನಡೆಸಿದ್ರು. ಈ ವೇಳೆ ಮೂವರು ಉಗ್ರರನ್ನ ಹತ್ಯೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇದರಲ್ಲಿ ಗಾಯಗೊಂಡ ಯೋಧರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಣಿವೆ ನಾಡಿನಗೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕುರಿತು ಮಂಗಳವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಇದರ ನಡುವೆ ಉಗ್ರರು ದೇಶದೊಳಗೆ ನುಸುಳಿ ವಿದ್ವಂಸಕ ಕೃತಕ್ಕೆ ಪ್ಲಾನ್ ಮಾಡಿದ್ರು.