ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ ಸಚಿವ ಪಿ.ಚಿದರಂಬರಂ ವಿಚಾರಣೆಗೆ ಇಡಿ ಅಧಿಕಾರಿಗಳು ತಿಹಾರ್ ಜೈಲಿಗೆ ತೆರಳಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಸಂಬಂಧ ಸಿಬಿಐ ಅಧಿಕಾರಿಗಳು ಈಗಾಗ್ಲೇ, ಇವರನ್ನ ಬಂಧಿಸಲಾಗಿದೆ. ಹೀಗಾಗಿ ಅಕ್ಟೋಬರ್ 17ರ ತನಕ ನ್ಯಾಯಾಂಗ ಬಂಧನದಲ್ಲಿರುವ ಪಿ.ಚಿದಂರಬಂ ತಿಹಾರ್ ಜೈಲಿನಲ್ಲಿದ್ದಾರೆ. ಜಾರಿ ನಿರ್ದೇಶನಾಲಯ ಸಹ ವಿಚಾರಣೆಗೆ ಅವಕಾಶ ಕೋರಿತ್ತು. ಇದಕ್ಕೆ ಮಂಗಳವಾರ ದೆಹಲಿ ವಿಶೇಷ ನ್ಯಾಯಲ ಒಪ್ಪಿಗೆ ನೀಡಿದೆ.
ತಿಹಾರ್ ಜೈಲಿನಲ್ಲಿಯೇ ಅವರನ್ನ ವಿಚಾರಣೆ ನಡೆಸಬಹುದು ಅಥವ ಅಗತ್ಯವಿದ್ರೆ ಬಂಧಿಸಬಹುದು ಅಂತಾ ಹೇಳಿತು. ಇಡಿ ಅಧಿಕಾರಿಗಳು ಈಗಾಗ್ಲೇ ತಿಹಾರ್ ಜೈಲ್ ತಲುಪಿದ್ದಿ, ಚಿದರಂಬರಂ ಮಗ ಕಾರ್ತಿ ಚಿದಂಬರಂ ಹಾಗೂ ಪತ್ನಿ ನಳಿನಿ ಚಿದಂಬರಂ ಸಹ ತಿಹಾರ್ ಜೈಲು ತಲುಪಿದ್ದಾರೆ.