ಪ್ರಜಾಸ್ತ್ರ ಸುದ್ದಿ
ಶ್ರೀನಗರ: ಉತ್ತರಾಖಂಡ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರದಲ್ಲಿ ಪ್ರವಾಹ, ಹವಾಮಾನ ವೈಪರಿತ್ಯದಿಂದಾಗಿ 22 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ವೈಷ್ಣವೋದೇವಿ ಯಾತ್ರೆ ರದ್ದುಗೊಳಿಸಲಾಗಿತ್ತು. ಇಂದಿನಿಂದ ಮತ್ತೆ ಯಾತ್ರೆ ಶುರುವಾಗಿದೆ.
ಹವಾಮಾನದಿಂದಾಗಿ ಸಧ್ಯ ಹೆಲಿಕಾಪ್ಟರ್ ಸೇವೆ ಸ್ಥಗಿತಗೊಳಿಸಲಾಗಿದೆ. ಇನ್ನು ಸ್ಥಳದಲ್ಲಿ ಯಾತ್ರಿಕರ ರಕ್ಷಣೆಗೆ ಪೊಲೀಸರು, ಸಿಆರ್ ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಡೀ ಪರಿಸ್ಥಿತಿ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ನಿಗಾವಹಿಸುತ್ತಿದೆ.