ಇದೆ ಕಾರಣಕ್ಕೆ ಪಾಲಿಸ್ಟರ್ ಧ್ವಜಕ್ಕೆ ವಿರೋಧ ವ್ಯಕ್ತವಾಯಿತು!

175

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಷ್ಟ್ರೀಯ ಧ್ವಜಕ್ಕೆ ಅವಮಾನವಾಗುತ್ತಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ಚರ್ಚೆಗಳು ನಡೆದಿವೆ. ಫೋಟೋ, ವಿಡಿಯೋಗಳು ಹಂಚಿಕೊಳ್ಳಲಾಗುತ್ತಿದೆ. ದೇಶದ ಬಾವುಟಕ್ಕೆ ಅವಮಾನ ಮಾಡುವಂತೆ ಮಾಡಿದ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಲೇ ಇದೆ.

ವಕೀಲ, ರಾಜಕೀಯ ಕಾರ್ಯಕರ್ತ ದೀಪಕ್ ಪುಷ್ಕರ್ ನಾಥ್ ಎಂಬುವರು ತಮ್ಮ ಟ್ವೀಟರ್ ನಲ್ಲಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಂತರ ರಾಷ್ಟ್ರಧ್ವಜ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು. ಖಾದಿಯಿಂದ ತಯಾರಾಗುತ್ತಿದ್ದ ಹಾಗೂ ನಿರ್ಧಿಷ್ಟ ಜಾಗದಲ್ಲಿ ನಿರ್ಧಿಷ್ಟ ವ್ಯಕ್ತಿಗಳು ಧ್ವಜಾರೋಹಣ ಮಾಡುತ್ತಿದ್ದರು. ಆದರೆ, ಈ ಬಾರಿಯ ರಾಜಕೀಯ ದಾಳವಾಗಿ ಬಳಕೆಯಾದ ಬಾವುಟಕ್ಕೆ ಎಷ್ಟು ಅವಮಾನ ಮಾಡಬೇಕೋ ಅಷ್ಟೊಂದು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!