ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಮಹದಾಯಿ ಯೋಜನೆ ಪ್ರಗತಿಯಲ್ಲಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ಅನುಮತಿ ಕೋರಲಾಗಿದೆ. ಅದು ಅಂತಿಮ ಘಟ್ಟದಲ್ಲಿದೆ ಹೊರತು ನೆನಗುದಿಗೆ ಬಿದ್ದಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಜಲ ಆಯೋಗದಿಂದ ಫೈನಲ್ ಕ್ಲಿಯರೆನ್ಸ್ ಬರಬೇಕಿದೆ. ಅರಣ್ಯ ಇಲಾಖೆಯ ಅನುಮತಿ ಬರಬೇಕಿದೆ. ಎರಡು ಬಂದ ಬಳಿಕ ಕಾಮಗಾರಿ ಶುರು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಟಿಪ್ಪು-ಸಾವರ್ಕರ್ ವಿಚಾರಗಳ ಬಗ್ಗೆ ಪರ ವಿರೋಧಗಳಿವೆ. ಅದನ್ನು ರಾಜಕಾರಣ ಮಾಡುವುದು ಆಯಾ ಪಕ್ಷಕ್ಕೆ ಬಿಟ್ಟಿದ್ದು ಎಂದಿದ್ದಾರೆ.