ಉಗ್ರರ ದಾಳಿ: ಪೊಲೀಸ್ ಅಧಿಕಾರಿ ಹುತಾತ್ಮ.. ಯೋಧರಿಬ್ಬರಿಗೆ ಗಾಯ

261

ಪ್ರಜಾಸ್ತ್ರ ಸುದ್ದಶ

ಶ್ರೀನಗರ: ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಇಂದು ಬೆಳಗ್ಗೆ ಉ್ರಗರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ಇಬ್ಬರು ಸೈನಿಕರಿಗೆ ಗಾಯಗಳಾಗಿವೆ.

ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಅನ್ನೋ ಪ್ರದೇಶದಲ್ಲಿ ದಾಳಿ ನಡೆಸಿ ಎಸ್ಕೇಪ್ ಆಗಿದ್ದು, ಭದ್ರತಾ ಪಡೆ ಯೋಧರು ಉ್ರಗರನ್ನ ಸದೆ ಬಡೆಯಲು ಪ್ರದೇಶವನ್ನ ಸುತ್ತವರೆದಿದ್ದಾರೆ.

ಇನ್ನು ಪುಲ್ವಾಮಾ ಜಿಲ್ಲೆಯಲ್ಲಿನ ಸೇತುವೆಯೊಂದನ್ನ ಸ್ಫೋಟಿಸಲು ಉಗ್ರರು ಯತ್ನಿಸಿದ್ದು, ಅದನ್ನ ವಿಫಲಗೊಳಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ಬೆಂಬಲಿತ ಉಗ್ರರ ಕೃತ್ಯವನ್ನ ಭದ್ರತಾ ಪಡೆ ಯೋಧರ ವಿಫಲಗೊಳಿಸಿದ್ದಾರೆ.

ಪುಲ್ವಾಮಾ ಜಿಲ್ಲೆಯ ತುಜಾನ್ ಗ್ರಾಮದ ಸೇತುವೆ ಕೆಳಗೆ ಸ್ಫೋಟಕಗಳನ್ನ ಇಟ್ಟಿದ್ರು. ಕಳೆದ ತಡರಾತ್ರಿ ಭದ್ರತಾ ಪಡೆ ಯೋಧರು, ಪತ್ತೆ ಹಚ್ಚಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಬಿಜೆಪಿ ಮುಖಂಡರು ಹಾಗೂ ಪಂಚಾಯ್ತಿ ಸದಸ್ಯರನ್ನ ಗುರಿಯಾಗಿಟ್ಟುಕೊಂಡು ದಾಳಿಗೆ ಯತ್ನಿಸ್ತಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ದೆ ಈ ಸೇತುವೆ ಮೂಲಕ ಸೇನಾ ವಾಹನಗಳು ಬದ್ಗಾಂ ಜಿಲ್ಲೆಗೆ ಸಂಚಾರ ಮಾಡುತ್ತೇವೆ. ಹೀಗಾಗಿ ಇದು ಪ್ರಮುಖ ಸೇತುವೆಯಾಗಿದೆ. ಕಾಶ್ಮೀರ ಐಜಿಪಿ ವಿಜಯಕುಮಾರ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!