ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಹೆಚ್.ಜಿ ಪಿಯು ಕಾಲೇಜಿನ ನೂತನ ಪ್ರಾಚಾರ್ಯರಾಗಿ ಎ.ಆರ್ ಹೆಗ್ಗಣದೊಡ್ಡಿ ಅವರನ್ನ ನೇಮಿಸಲಾಗಿದೆ. ಹೀಗಾಗಿ ನಿಮಗಾಗಿ ಟೆಕ್ನಾಲಜಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ ನೌಕರರ ಸಂಘ ಹಾಗೂ ನಿಮಗಾಗಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತ್ನಾಡಿದ ಎ.ಆರ್ ಹೆಗ್ಗಣದೊಡ್ಡಿ ಅವರು, ತಮ್ಮ ಕಡು ಬಡತನದ ದಿನಗಳನ್ನ ಮೆಲಕು ಹಾಕಿದ್ರು. ಕಲಿಯದ ತಾಯಿ ತಮ್ಮ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ ಪರಿಯನ್ನು ನೆನಪಿಸಿಕೊಂಡಾಗ ಕಣ್ಣಾಲಿಗಳು ತುಂಬಿ ಬರುತ್ತವೆ ಎಂದು ಹೇಳಿದ್ರು. ಬಿ.ಎಡ್, ಎಂಎ ಎಂಎಡ್ ಮುಗಿಸಿ ಹೆಚ್.ಜಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿಕೊಂಡು ಈಗ ಪ್ರಾಚಾರ್ಯ ಹುದ್ದೆ ಅಲಂಕರಿಸಿದ್ದೇನೆ ಎಂದರು.
ಶಿಕ್ಷಕರಾದ ಲಕ್ಕಣ್ಣ ಬೀರಗೊಂಡ ಪ್ರಾಸ್ತಾವಿಕವಾಗಿ ಮಾತ್ನಾಡಿದ್ರು. ಈ ವೇಳೆ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ಜಿ.ಎಸ್ ಹೊಸಗೌಡರ, ತಾಲೂಕು ಕುರುಬ ಸಂಘದ ಮುಖಂಡ ಶರಣಪ್ಪ ಹಿರೇಕುರುಬರ, ಎಪಿಎಂಸಿ ಸದಸ್ಯ ಸಿದ್ದಣ್ಣ ಹಿರೇಕುರುಬರ, ನಿಮಗಾಗಿ ಟೆಕ್ನಾಲಜಿ ಸಿಇಒ ರಾಘವೇಂದ್ರ ಜೋಶಿ, ಜನಶ್ರೀ ಸೌಹಾರ್ದ ಅಧ್ಯಕ್ಷ ನಾನಾಗೌಡ ಪಾಟೀಲ, ಸಮಾಜ ಸೇವಕ ಮಲ್ಲು ಹಿರೋಳ್ಳಿ, ಸಿದ್ದಣ್ಣ ಮಾಗಣಗೇರಿ, ಅಮೋಘ ತೆಳಗೇರಿ, ಮಲ್ಲೇಶಪ್ಪ ರಾಣೆ ಸೇರಿದಂತೆ ಅನೇಕರು ಉಪಸ್ಥಿತರಿದ್ರು. ಶಿಕ್ಷಕ ಸಿದ್ದು ಹದ್ನೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದ್ರು.