ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಬಸ್ ಸಂಚಾರ ಶುರುವಾಗಿದೆ. ಒಂದು ಬಸ್ಸಿನಲ್ಲಿ 30ಜನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಅಲ್ದೇ, ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಟೈಸರ್ ಸಿಂಪಡನೆ ಮಾಡಲಾಗ್ತಿದೆ.
ರಾಜ್ಯದ ಮೂಲೆ ಮೂಲೆಗೆ ಜನರು ಹೋಗಲು ಪ್ರತಿ ಬಸ್ ನಿಲ್ದಾಣಗಳಲ್ಲಿ ಸೇರಿದ್ದಾರೆ. ಹೀಗಾಗಿ ಕೆಲವು ಕಡೆ ಬೆಳಗ್ಗೆ 7ರಿಂದಲೇ ಬಸ್ ಸಂಚಾರ ಶುರುವಾದ್ರೆ, ಇನ್ನು ಕೆಲವು ಕಡೆ ಬಸ್ ಸಂಚಾರ ಶುರುವಾಗಿಲ್ಲ. ಇದರ ನಡುವೆ 10 ವರ್ಷಕ್ಕಿಂತ ಕೆಳಗಿರುವ ಮಗು ಹಾಗೂ ವೃದ್ಧರಿಗೆ ಪ್ರಯಾಣಕ್ಕೆ ನಿರ್ಬಂಧಿಸಲಾಗಿದೆ. ಹೀಗಾಗಿ ಕುಟುಂಬ ಸಮೇತ ಊರಿಗೆ ಹೋಗಲು ಬಂದವರಿಗೆ ಶಾಕ್ ಆಗಿದೆ.
ಪುಟ್ಟ ಪುಟ್ಟ ಮಕ್ಕಳು, ಹಿರಿಯ ನಾಗರಿಕರಿಗೆ ಪ್ರಯಾಣಕ್ಕೆ ಅವಕಾಶವಿಲ್ಲ. ಹೀಗಾಗಿ ಅವರನ್ನ ವಾಪಸ್ ಮನೆಗೆ ಕಳುಹಿಸಲಾಗ್ತಿದೆ. ಹೆತ್ತವರನ್ನ ಬಿಟ್ಟು ಚಿಕ್ಕ ಮಕ್ಕಳು ಇರುವುದಾದ್ರು ಹೇಗೆ? ಸಿಟಿಗಳಲ್ಲಿ ಇರೋದು ಸಿಂಗಲ್ ಫ್ಯಾಮಿಲಿ ಹೆಚ್ಚು. ಮಕ್ಕಳನ್ನ, ಹಿರಿಯರನ್ನ ನೋಡಿಕೊಳ್ಳುವುದು ಯಾರು ಅನ್ನೋ ಪ್ರಶ್ನೆ ಜನರಲ್ಲಿ ಕಾಡ್ತಿದೆ.