ಪ್ರಜಾಸ್ತ್ರ ಸುದ್ದಿ
ಅಗರ್ತಲ: ಟೌನ್ ಬರ್ಡೋವಾಲಿ ವಿಧಾನಸಭೆ ಉಪ ಚುನಾವಣೆಯಲ್ಲಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರ ಕುರ್ಚಿ ಭದ್ರವಾಗಿದೆ. ಸಿಎಂ ಆಗಿ ಮುಂದುವರೆಯಲು ಈ ಗೆಲುವು ಅವರಿಗೆ ಬೇಕೇಬೇಕಾಗಿತ್ತು.
ಕಳೆದ ತಿಂಗಳಲು ಬಿಪ್ಲಬ್ ದೇಬ್ ಹಠಾತ್ ಆಗಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆಗ ರಾಜ್ಯಸಭಾ ಸದಸ್ಯರಾಗಿರುವ ಮಾಣಿಕ್ ಸಹಾ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಉಪ ಚುನಾವಣೆಯ ಗೆಲುವು ಅವರ ಸಿಎಂ ಸ್ಥಾನ ಉಳಿಸಿದೆ.