ಪ್ರಜಾಸ್ತ್ರ ಸುದ್ದಿ
ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಜೋರಾಗಿದೆ. ಸಿಎಂ ಉದ್ಭವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಾಸಕರಿಗೆ ಕೇಂದ್ರಿಂದ ವೈ ಶ್ರೇಣಿ ಭದ್ರತೆ ನೀಡಲಾಗಿದೆ.
ಸಚಿವ ಏಕನಾಥ್ ಶಿಂಧೆ ನಾಯಕತ್ವದ ಬಂಡಾಯ ಶಾಸಕರು ಗೂಹಾಟಿಯ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಶಾಸಕರಿಗೆ ನೀಡಿದ್ದ ಭದ್ರತೆ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ವೈ ಶ್ರೇಣಿ ಭದ್ರತೆ ನೀಡಿದೆ. ಅಲ್ಲಿಗೆ ಈ ಪಾಲಿಟ್ರಿಕ್ಸ್ ನಲ್ಲಿ ಬಿಜೆಪಿಯ ಕೈವಾಡ ಇರುವುದು ಬಹಿರಂಗವಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.