ಪೇದೆ ಸಾವಿಗೆ ಕಾರಣವಾಯ್ತು ‘ಆ’ ಕಾರು!

177

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇವನಹಳ್ಳಿ ವಿಮಾನ ನಿಲ್ದಾಣದ ಹತ್ತಿರದ ಚಿಕ್ಕಜಾಲ ಬಳಿ ಕೆಟ್ಟು ನಿಂತಿದ್ದ ಕಾರೊಂದು ನೋಡಲು ಹೋದ ಕಾನ್ಸ್ ಟೇಬಲ್ ವೊಬ್ಬರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುರೇಶ್ ಮೃತ ಕಾನ್ಸ್ ಟೇಬಲ್.

ಇನ್ಸ್ ಪೆಕ್ಟರ್ ಧರ್ಮೇಗೌಡ ಹಾಗೂ ಜೀಪ್ ಚಾಲಕ ಸುರೇಶ್ ರಾತ್ರಿ ಪಾಳೆಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ನಸುಕಿನ ಜಾವ ಕೆಟ್ಟು ನಿಂತಿದ್ದ ಕಾರು ಪರಿಶೀಲನೆ ಮಾಡಲು ಹೋದಾಗ ವೇಗವಾಗಿ ಬಂದ ಇನೋವಾ ಕಾರು ಡಿಕ್ಕಿ ಹೊಡೆದಿದೆ. ಹೀಗಾಗಿ ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ಸ್ ಪೆಕ್ಟರ್ ಧರ್ಮೇಗೌಡ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕಾರಿನಲ್ಲಿ ಮೂವರು ಹುಡುಗರು, ಮೂವರು ಹುಡಗಿಯರು ಇದ್ದು, ಭಾನುವಾರ ರಾತ್ರಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿ ನಸುಕಿನ ಜಾವ ನಂದಿಬೆಟ್ಟಕ್ಕೆ ಹೊರಟ್ಟಿದ್ದರಂತೆ. ಈ ಭೀಕರ ಅಪಘಾತದಲ್ಲಿ ಪೇದೆ ಪ್ರಾಣ ಹೋಗಿದೆ. ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!