Search

ಕಥೆ, ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

440

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಆಲಮೇಲ: ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ(ರಿ)ಯು ರಾಜ್ಯಮಟ್ಟದ ಪ್ರೊ.ಎಚ್.ಟಿ.ಪೋತೆ ಕಥೆ, ಕಾವ್ಯ ಪ್ರಶಸ್ತಿ ಹಾಗೂ ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರತಿವರ್ಷ ನೀಡುವ ಬೆರಗು ಪ್ರಶಸ್ತಿಗೆ ಹಸ್ತಪ್ರತಿ ಮತ್ತು ಕೃತಿಗಳನ್ನು ಆಹ್ವಾನಿಸಿದೆ.

ಪ್ರೊ.ಎಚ್‌.ಟಿ.ಪೋತೆ ಕಥೆ-ಕಾವ್ಯ ಪ್ರಶಸ್ತಿಗೆ ಈ ಬಾರಿ ಮಹಿಳಾ ಲೇಖಕಿಯರಿಂದ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಕನಿಷ್ಠ 10 ಕಥೆಗಳನ್ನು ಹೊಂದಿರುವ ಹಾಗೂ 40 ಕವಿತೆಗಳಿಗೆ ಮೀರದ, ಮುದ್ರಣಕ್ಕೆ ಸಿದ್ಧವಿರುವ ಹಸ್ತಪ್ರತಿ ಆಹ್ವಾನಿಸಲಾಗಿದೆ. ನುಡಿ, ಬರಹದಲ್ಲಿದ್ದರೆ ಎರಡು ಪ್ರತಿ ಕಳಿಸಿಕೊಡಬೇಕು. ಈ ಪ್ರಶಸ್ತಿ 10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಆಯ್ಕೆಯಾದ ಹಸ್ತಪ್ರತಿಗಳನ್ನು ಪ್ರಕಾಶನದ 6ನೇ ವರ್ಷಾಕೋತ್ಸವದ ವೇಳೆ ಪ್ರಕಟಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.

ಇನ್ನು ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ಪ್ರತಿವರ್ಷ ನೀಡುವ ಬೆರಗು ಪ್ರಶಸ್ತಿಗೆ 2022ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ. ಪಿಎಚ್ ಡಿ ಪ್ರಬಂಧ ಹೊರತುಪಡಿಸಿ ಎಲ್ಲ ಪ್ರಕಾರದ ಕೃತಿಗಳನ್ನು ಕಳಿಸಬಹುದು. ಅಕ್ಟೋಬರ್ 15, 2023ರೊಳಗೆ ಹಸ್ತಪ್ರತಿ, ಕೃತಿಗಳನ್ನು ಕಳಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಳಾಸ: ವಿಜಯಲಕ್ಷ್ಮಿ ರಮೇಶ ಕತ್ತಿ, ಪ್ರಕಾಶಕರು, ಬೆರಗು ಪ್ರಕಾಶನ ಸಂಸ್ಥೆ, ವಿನಾಯಕ ನಗರ ಆಲಮೇಲ-586 202, ತಾ: ಅಲಮೇಲ, ಜಿಲ್ಲೆ: ವಿಜಯಪುರ ಮೊ. 7795341335




Leave a Reply

Your email address will not be published. Required fields are marked *

error: Content is protected !!