ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೇಶದಲ್ಲಿ ಕರೋನಾ 2ನೇ ಅಲೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎಲ್ಲೆಡೆ ಮತ್ತೆ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಲಾಗ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಲಾಕ್ ಡೌನ್ ಬಗ್ಗೆ ಯಾವುದೇ ಮುಂದಾಲೋಚನೆ ಇಲ್ಲದೆ ತೆಗೆದುಕೊಂಡ ನಿರ್ಧಾರದಿಂದ ಜನರು ಇಂದಿಗೂ ಸಮಸ್ಯೆ ಎದುರಿಸ್ತಿದ್ದಾರೆ ಎಂದಿದ್ದಾರೆ. ಕಳೆದ ಮಾರ್ಚ್ 24ರಿಂದ ಹಂತ ಹಂತವಾಗಿ ಘೋಷಣೆ ಮಾಡಿಕೊಂಡು ಬಂದ ಲಾಕ್ ಡೌನ್ ಗೆ ಯಾವುದೇ ದೂರದೃಷ್ಟಿ ಇರ್ಲಿಲ್ಲ. ಇದರ ಪರಿಣಾಮ ಇಂದಿಗೂ ಅನುಭವಿಸುವಂತಾಗಿದೆ ಅಂತಾ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.