ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕೆಲ ಪತ್ರಕರ್ತರು ಸೇರಿಕೊಂಡಿರುವುದು ಬಯಲಾಗಿದೆ. ಈ ಸಂಬಂಧ ಇಬ್ಬರು ವಿಡಿಯೋ ಹೇಳಿಕೆ ಸಹ ಬಿಡುಗಡೆ ಮಾಡಿದ್ದಾರೆ. ಭವಿತ ಅನ್ನೋ ವ್ಯಕ್ತಿ ಬಳಿಕ ನರೇಶ ಎಂಬಾತ ವಿಡಿಯೋ ರಿಲೀಸ್ ಮಾಡಿ, ಸಿಡಿ ಪ್ರಕರಣಕ್ಕೂ ತನ್ಗೂ ಸಂಬಂಧವಿಲ್ಲ ಎಂದಿದ್ದಾನೆ.
ನರೇಶ ವಿಡಿಯೋ ಅಲ್ಲಿಂದ ಅಪ್ಲೋಡ್ ಮಾಡಲಾಗಿದೆ ಅನ್ನೋದರ ಕುರಿತು ಎಸ್ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈತನ ವಿಡಿಯೋ ದೆಹಲಿಯಿಂದ ಅಪ್ಲೋಡ್ ಆಗಿದೆ. ಅಲ್ದೇ, ಸಿಡಿ ಯುವತಿ ಮೊಬೈಲ್ ನಂಬರ್ ಸಹ ದೆಹಲಿಯಲ್ಲಿ ಆನ್ ಆಗಿದ್ದು, ಮಧ್ಯಾಹ್ನದ ಬಳಿಕ ಸ್ವೀಚ್ ಆಫ್ ಆಗಿದೆ ಅನ್ನೋ ಮಾಹಿತಿ ತಿಳಿದು ಬಂದಿದೆ.