ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಇತ್ತೀಚೆಗೆ ಕೆಲ ತಮಿಳು ಸ್ಟಾರ್ ನಟ, ನಟಿಯರ ವಿರುದ್ಧ ಅಲ್ಲಿನ ನಿರ್ಮಾಪಕರು ಗರಂ ಆಗಿದ್ದರು. ಅವರ ವಿರುದ್ಧ ಕ್ರಮಕ್ಕೆ ನಿರ್ಮಾಪಕರ ಸಂಘ ರೆಡಿಯಾಗಿದೆ. ಇದೇ ಹೊತ್ತಿನಲ್ಲಿ ಕನ್ನಡದ ಸ್ಟಾರ್ ನಟ ಸುದೀಪ್ ವಿರುದ್ಧ ನಿರ್ಮಾಪಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ನಟ ಸುದೀಪ್ ತಮ್ಮಿಂದ ಹಣ ಪಡೆದು ಸಿನಿಮಾ ಮಾಡಿಕೊಡದೆ, ತಮಗೂ ಸಿಗದೆ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಎನ್.ಕುಮಾರ್ ಆರೋಪಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಸುದೀಪ್ ಸಂಬಂಧ ಚೆನ್ನಾಗಿತ್ತು. ಸುಮಾರು 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ಬರೀ ಇವತ್ತು, ನಾಳೆ ಅಂತಿದ್ದಾರೆ. ನೆಕ್ಸ್ಟ್ ಸಿನಿಮಾ ನಿಮ್ದೆ ಅಂತಾರೆ. ಆದರೆ, ಇದುವರೆಗೂ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಮುತ್ತತ್ತಿ ಸತ್ಯರಾಜ್ ಸಿನಿಮಾ ಟೈಟಲ್ ರೆಡಿಯಿದೆ. ನಂದ ಕಿಶೋರ್ ಸ್ಕ್ರಿಪ್ಟ್ ರೆಡಿ ಮಾಡಿದ್ದರು. ಆದರೆ, ಸುದೀಪ್ ಈ ಬಗ್ಗೆ ಮಾತನಾಡುತ್ತಿಲ್ಲ. ನಂಬಿಕೆ ಮೇಲೆ ಪೂರ್ತಿ ದುಡ್ಡು ಕೊಟ್ಟಿದ್ದೀನಿ. ಚೇಂಬರ್ ನಿಂದ 6 ಪತ್ರ ಬರೆದಿದ್ದರು, ಒಂದಕ್ಕೂ ಉತ್ತರಿಸಿಲ್ಲ. ನಾನು ಯಾರ ಹತ್ತಿರ ಹೋಗಿ ಕೇಳಬೇಕು. ನಾನು ಹಣ ಕೇಳುತ್ತಿಲ್ಲ. ಸಿನಿಮಾ ಮಾಡಿಕೊಡಿ ಅಂತಿದ್ದೇನೆ ಎಂದು ನಿರ್ಮಾಪಕ ಎನ್.ರವಿಕುಮಾರ್ ಹೇಳಿದರು. ಈ ಕುರಿತು ಸುದೀಪ್ ಏನು ಹೇಳುತ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.