ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಜಾತಿಗಣತಿ ವರದಿ ಬಿಡುಗಡೆಯಾಗಬಾರದು ಎಂದು ಹೇಳುವುದು ಸರಿಯಲ್ಲ. ಇದನ್ನು ವಿರೋಧಿಸಬಾರದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ವರದಿಯ ಪರಿಣಾಮದ ಬಗ್ಗೆ ಸಲಹೆ, ಸೂಚನೆಗಳಿದ್ದರೆ ಕೊಡಲಿ ಎಂದಿದ್ದಾರೆ.
ಜಾತಿಗಣತಿಗೆ ಸರ್ಕಾರ ಹಣ ಖರ್ಚು ಮಾಡಿದೆ. ವರದಿ ಪರಿಣಾಮಗಳ ಬಗ್ಗೆ, ಬೇರೆ ಬೇರೆ ನಿರ್ಧಾರಗಳ ಕುರಿತು ಪ್ರತಿಭಟನೆ ಮಾಡಿ, ಸಲಹೆಗಳನ್ನು ನೀಡಲಿ. ಇದಕ್ಕೆ ಯಾವುದೇ ತಕರಾರು ಇಲ್ಲ. ವರದಿ ಜಾರಿಯಾಗಬಾರದು ಎನ್ನುವುದು ಸರಿಯಿಲ್ಲ ಅಂತಾ ಸಚಿವ ಪಮರೇಶ್ವರ್ ಹೇಳಿದ್ದಾರೆ.