ಶಿರಸಿಯಲ್ಲಿ ಒಂದೇ ಕುಟುಂಬದ ಐವರು ಜಲಸಮಾಧಿ

219

ಪ್ರಜಾಸ್ತ್ರ ಸುದ್ದಿ

ಶಿರಸಿ: ನದಿಯಲ್ಲಿ ಆಕಸ್ಮಿಕವಾಗಿ ಬಿದ್ದ ಇಬ್ಬರನ್ನು ಉಳಿಸಲು ಹೋದ ಮೂವರು ಸೇರಿ ಒಂದೇ ಕುಟುಂಬದ ಐವರು ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಶಾಲ್ಮಲಾ ನದಿಯ ಭೂತನಗುಂಡಿ ಪ್ರದೇಶದಲ್ಲಿ ಭಾನುವಾರ ನಡೆದಿದೆ. ರಾಮನಬೈಲ್ ಮತ್ತು ಕಸ್ತೂರಿಬಾ ನಗರದ ನಿವಾಸಿಗಳು ಮೃತಪಟ್ಟಿದ್ದಾರೆ.

ಉಮರ್ ಸಿದ್ದಿಕ್, ಮಿಸಬಾ, ನಾದಿಯಾ ಶೇಖ್, ಮಹಮ್ಮದ್ ಸಲೀಂ ಹಾಗೂ ನಾಬಿಲ್ ಮೃತ ದುರ್ದೈವಿಗಳು. ಪಿಕ್ ನಿಕ್ ಎಂದು ಕುಟುಂಬದ 20 ಜನ ಸದಸ್ಯರು ಶಾಲ್ಮಲಾ ನದಿಯ ತಟಕ್ಕೆ ಬಂದಿದ್ದಾರೆ. ನಾದಿಯಾ ಹಾಗೂ ನಾಬಿಲ್ ಆಕಸ್ಮಿಕವಾಗಿ ನದಿಯಲ್ಲಿ ಬಿದ್ದಿದ್ದಾರೆ. ಅವರನ್ನು ಉಳಿಸಲು ತಕ್ಷಣ ಸಲೀಂ, ಮಿಸಬಾ, ಸಿದ್ದಿಕ್ ನದಿಗೆ ಜಿಗಿದಿದ್ದಾರೆ. ಯಾರಿಗೂ ಈಜು ಬರದ ಕಾರಣ ಈ ದುರಂತ ನಡೆದಿದೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಲೈಫ್ ಗಾರ್ಡ್ ಟೀಂ, ಸ್ಥಳೀಯ ಈಜುಗಾರರು ಬಂದು ನಾಪತ್ತೆಯಾದವರನ್ನು ಹುಡುಕು ಕೆಲಸ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!