ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವರ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ಟೀಂ ರೆಡಿಯಾಗಿದೆ. ಸೌಮೇಂದ್ರ ಮುಖರ್ಜಿ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಮೊದಲ ದಿನವೇ ಐವರನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗ್ತಿದೆ.
ಮೊದಲ ವ್ಯಕ್ತಿ ಕಲ್ಲಹಳ್ಳಿಗೆ ಸಿಡಿ ಕೊಟ್ಟವನು. 2ನೇ ವ್ಯಕ್ತಿ ಸಿಡಿ ಎಡಿಟ್ ಮಾಡಿರುವವನು, 3ನೇ ವ್ಯಕ್ತಿ ಸ್ಕ್ರಿಪ್ಟ್ ಬರೆದವನು, 4ನೇ ವ್ಯಕ್ತಿಯನ್ನ ಚಿಕ್ಕಮಗಳೂರಿನ ಅಲ್ದೂರಿನಲ್ಲಿ ಹಾಗೂ 5ನೇ ವ್ಯಕ್ತಿ ಸಿಡಿ ಕೊಡಲು ಬಂದವನ ಜೊತೆ ಇದ್ದವನು ಎಂದು ಹೇಳಲಾಗ್ತಿದೆ. ಇವರೆಲ್ಲರನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗ್ತಿದೆಯಂತೆ.