ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ಕೊಡುತ್ತಿದೆ. ಸರ್ಕಾರಕ್ಕೆ ಗೊತ್ತಿಲ್ಲದೆ ಎರ್.ಎಸ್ಎಸ್, ಭಜರಂಗದಳ ಇಷ್ಟೆಲ್ಲ ಮಾಡುತ್ತಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೂಡಲೇ ಸರ್ಕಾರ ಇದನ್ನು ಹತ್ತಿಕ್ಕಬೇಕು. ಸಮಾಜದ ಶಾಂತಿ ಕದಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ದೇವಸ್ಥಾನ, ಮಸೀದಿ, ಚರ್ಚ್ ಎಲ್ಲ ಕಡೆ ಧ್ವನಿ ವರ್ಧಕ ಬಳಸುತ್ತಾರೆ. ಇದರಿಂದ ಯಾರಿಗೆ ತೊಂದರೆಯಾಗಿದೆ. ಇಂತ ಘಟನೆಗಳಿಂದ ರಾಜ್ಯದ ಅಭಿವೃದ್ಧಿ ಆಗಲ್ಲ. ಉದ್ಯೋಗ ಸೃಷ್ಟಿಯಾಗಲ್ಲ, ಬಂಡವಾಳ ಹೂಡುವವರು ಬರಲ್ಲ, ಜಿಡಿಪಿ ಬೆಳವಣಿಗೆಯಾಗಲ್ಲವೆಂದು ಕಿಡಿ ಕಾರಿದ್ದಾರೆ.