ಬೆಂಗಳೂರು: ಹಿರಿಯ ಸಂಶೋಧಕ ಡಾ.ಎಂ ಚಿದಾನಂದಮೂರ್ತಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಸುಮನಳ್ಳಿ ವಿದ್ಯುತ್ ಚಿತಾಗಾರದಲ್ಲಿ ನಡೆಯಿತು. ನಿನ್ನೆ ಬೆಳಗ್ಗೆ ನಾಡೋಜ ಚಿದಾನಂದಮೂರ್ತಿ ಅವರು ನಿಧನಹೊಂದಿದ್ರು. ಇಂದು ಅವರ ಅಂತಿಮ ಸಂಸ್ಕಾರ ನಡೆಯಿತು. ಸಿಎಂ ಬಿ.ಎಸ್. ಯಡಿಯೂರಪ್ಪನವರು ಅಂತಿಮ ನಮನ ಸಲ್ಲಿಸಿದ್ರು.
ವೀರಶೈವ-ಲಿಂಗಾಯತ ಪದ್ಧತಿಯಲ್ಲಿ ಮೃತದೇಹವನ್ನ ಸಮಾಧಿ ಮಾಡುವ ಸಂಪ್ರದಾಯವಿದೆ. ಆದ್ರೆ, ಚಿದಾನಂದಮೂರ್ತಿ ಅವರು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸುವಂತ ಮೊದಲೇ ಸೂಚಿಸಿದ ಕಾರಣಕ್ಕೆ ಅವರ ಆಸೆಯಂತೆ ಅಂತಿಮಸಂಸ್ಕಾರ ಮಾಡಲಾಯ್ತು. ಈ ವೇಳೆ ಅಮರವಾಗಲಿ ಚಿದಾನಂದಮೂರ್ತಿ.. ಸಿರಿಗನ್ನಡಂ ಗೆಲ್ಗೆ ಅಂತಾ ಘೋಷಣೆಗಳನ್ನ ಕೂಗಲಾಯ್ತು.