ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ: ಸರ್ಕಾರಕ್ಕೆ ಮುಖಭಂಗ

320

ಚಿಕ್ಕಮಗಳೂರು: ಸಾಕಷ್ಟು ವಿವಾದ, ಜಟಾಪಟಿ ನಡುವೆಯೂ ಇಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿದೆ. ಸರ್ಕಾರದ ವಿರೋಧದ ನಡುವೆಯೂ ಜನರೇ ನೀಡಿದ ದೇಣಿಗೆ ಮೂಲಕ ಸಮ್ಮೇಳನ ನಡೆಸಲಾಗಿದೆ. ಈ ಮೂಲಕ ಸರ್ಕಾರಕ್ಕೆ ಚಾಟಿಯೇಟು ಬೀಸಲಾಗಿದೆ.

ಕಳೆದ 16 ವರ್ಷಗಳಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಿಕೊಂಡು ಬರಲಾಗ್ತಿದೆ. ಆದ್ರೆ, ಈ ಬಾರಿ ಕಲ್ಕುಳಿ ವಿಠ್ಠಲ ಹೆಗಡೆ ಅವರನ್ನ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರೋದು ಭಾರೀ ವಿರೋಧ ವ್ಯಕ್ತವಾಗಿತ್ತು. ಅವರು ನಕ್ಸಲ್ ಬೆಂಬಲಿಗರಾಗಿದ್ದು, ಅವರ ವಿರುದ್ಧ ಸಾಕಷ್ಟು ಪ್ರಕರಣಗಳಿವೆ ಅಂತಾ ಹೇಳಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಬಿಡುಗಡೆ ಮಾಡಬೇಕಿದ್ದ 1.5 ಕೋಟಿ ಅನುಧಾನ ಸಹ ತಡೆ ಹಿಡಿಯಲಾಯ್ತು.

ಈ ಬಗ್ಗೆ ಎಲ್ಲೆಡೆ ಭರ್ಜರಿ ಪರ-ವಿರೋಧದ ಚರ್ಚೆಗಳು ನಡೆದ್ವು. ಸಮ್ಮೇಳನ ವಿರೋಧಿಸುವವರ ಗುಂಪು ಹಾಗೂ ಪರವಾಗಿರುವವರ ಗುಂಪಿನ ನಡುವೆ ಸಾಕಷ್ಟು ವಾಕ್ಸಮರ ನಡೆಯಿತು. ಎಲ್ಲ ಅಡೆತಡೆಗಳ ನಡುವೆಯೂ ಸಮ್ಮೇಳನ ನಡೆದಿದೆ. ಇದ್ರಿಂದಾಗಿ ಸರ್ಕಾರಕ್ಕೆ ಮುಖಭಂಗವಾಗಿದೆ.




Leave a Reply

Your email address will not be published. Required fields are marked *

error: Content is protected !!