ವಾಹನ ಹಿಂದಕ್ಕೆ ತೆಗೆಯುವಾಗ ಮಗು ಸಿಲುಕಿ ಸಾವು

398

ಪ್ರಜಾಸ್ತ್ರ ಸುದ್ದಿ

ಆನೇಕಲ್: ಇಚರ್ ವಾಹನ ಹಿಂದಕ್ಕೆ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಮಗುವೊಂದು ವಾಹನಕ್ಕೆ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಕಾಮನಹಳ್ಳಿಯಲ್ಲಿ ನಡೆದಿದೆ. ಒಂದೂವರೆ ವರ್ಷದ ಮನಿಶಾದೇವಿ ಮೃತ ಬಾಲಕಿಯಾಗಿದ್ದಾಳೆ.

ಬಾಲಕಿ ತಂದೆ ಬಾಲಕೃಷ್ಣ ಮನೆ ಮುಂದೆ ನಿಲ್ಲಿಸಿದ ಇಚರ್ ವಾಹನ ರಿವರ್ಸ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!