ಪ್ರಜಾಸ್ತ್ರ ಸುದ್ದಿ
ವಿಜಯಪುರ: ಮತಾಂತರ ಮಾಡುವವರನ್ನು ಸಿಕ್ಕ ಸಿಕ್ಕಲ್ಲಿ ಒದೆ ಬೀಳುತ್ತೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮತಾಂತರ ಮಾಡುವವರಿಗೆ ಎಚ್ಚರಿಕೆ ನೀಡಿದರು.
ಅಸ್ಪೃಶ್ಯತೆ ಕಾರಣ ಹೇಳುತ್ತಾರೆ. ನೀರು ಕೊಡಲ್ಲ, ಮನೆಗೆ ಸೇರಿಸಿಕೊಳ್ಳಲ್ಲ, ಮುಟ್ಟಿಸಿಕೊಳ್ಳಲ್ಲ ಅನ್ನೋದೆಲ್ಲ ಇಲ್ಲವೆಂದು ಹೇಳುವುದಿಲ್ಲ. ಅದು ಅತ್ಯಂತ ಕ್ರೌರ್ಯವಾದ ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ರೋಗ ಅದು. ಅದನ್ನು ನಿವಾರಣೆ ಮಾಡಲು ನಾವು ಪ್ರಯತ್ನ ಮಾಡಬೇಕಿದೆ. ಇನ್ನು ಕ್ರಿಶ್ಚಿಯನ್ ರನ್ನು ಕೇಳುತ್ತೇನೆ. ದಲಿತ ಕ್ರಿಶ್ಚಿಯನ್ ಇದು ಎಲ್ಲಿಂದ ಬಂತು. ದಲಿತ ದೇವಾಂಗ, ಬ್ರಾಹ್ಮಣ ಕ್ರಿಶ್ಚಿಯನ್ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಇದೆಲ್ಲ ಕ್ರಿಶ್ಚಿಯನ್ ರ ಬೂಟಾಟಿಕೆ. ಈ ದೇಶವನ್ನು ಕ್ರಿಶ್ಚಿಯನ್ ಮಾಡಬೇಕು ಅಂತಾ ಹೊರಟಿದ್ದಾರೆ. ಇದರಲ್ಲಿ ಎರಡು ರೀತಿ ಇವೆ ಅಂತಾ ಮುತಾಲಿಕ್ ಹೇಳಿದರು. ಇನ್ನು ನಮ್ಮಂತ ಪ್ರಾಮಾಣಿಕ ಹಿಂದುವಾದಿಗಳು ಇವತ್ತಿನ ರಾಜಕೀಯದಲ್ಲಿ ಅನ್ ಫಿಟ್ ಎಂದರು.