ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆಗೆ ಇಡೀ ಪೊಲೀಸ್ ಇಲಾಖೆಗೆ ಶಾಕ್ ಆಗಿದೆ. ಉನ್ನತ ಅಧಿಕಾರಿ ನೇಣಿಗೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನ ಮೂಡಿಸಿದೆ. ಹತ್ತಾರ ಪ್ರಶ್ನೆಗಳ ನಡುವೆ ಇದೀಗ ಒಂದು ವಿಚಾರ ಹೊರ ಬಿದ್ದಿದೆ.
ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆಗೆ ಅತಿಯಾದ ಖಿನ್ನತೆ ಕಾರಣವೆಂದು ಹೇಳಲಾಗ್ತಿದೆ. ಲಕ್ಷ್ಮೀ 8 ವರ್ಷಗಳ ಹಿಂದೆ ಮದ್ವೆಯಾಗಿದ್ದಾರೆ. ಪತಿ ಅಮೇಜಾನ್ ಕಂಪನಿಯಲ್ಲಿ ಹೈದ್ರಾಬಾದ್ ನಲ್ಲಿ ಕೆಲಸ ಮಾಡ್ತಿದ್ದಾರೆ. ಮದುವೆಯಾಗಿ 8 ವರ್ಷಗಳಾದ್ರೂ ಮಕ್ಕಳಾಗಿರ್ಲಿಲ್ಲ. ಇದ್ರಿಂದಾಗಿ ಮಾನಸಿಕವಾಗಿ ಸಾಕಷ್ಟು ಖಿನ್ನತೆಗೆ ಒಳಗಾಗಿದ್ರಂತೆ.
ಡಿಪೆಶ್ರನ್ ಗೆ ಹೋಗಿದ್ದ ಲಕ್ಷ್ಮೀ ಡ್ರಿಂಕ್ಸ್ ಸೇವನೆ ಮಾಡುವುದು ಕಲಿತಿದ್ದರು. ವೈದ್ಯರಿಂದ ಕೌನ್ಸಲಿಂಗ್ ಸಹ ಪಡೆದುಕೊಳ್ತಿದ್ರು. ಆದ್ರೂ, ಅವರಲ್ಲಿ ಸದಾ ಮಕ್ಕಳಾಗಿಲ್ಲ ಅನ್ನೋ ಕೊರಗು ಇತ್ತು. ಈ ಕಾರಣಕ್ಕೆ ಇದಕ್ಕೂ ಮೊದ್ಲು 2 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ರಂತೆ.
ಹೀಗಿರುವಾಗ ಸ್ನೇಹಿತನ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಲಕ್ಷ್ಮೀ ಏಕಾಏಕಿ ಎದ್ದು ರೂಮಿಗೆ ಹೋಗಿದ್ದಾರೆ. ಅಲ್ಲಿದ್ದವರಿಗೆ ಅದು ಗಮನಕ್ಕೆ ಬಂದಿಲ್ಲ. ಎಲ್ಲರೂ ಖುಷಿಯ ಮೂಡಿನಲ್ಲಿರುವಾಗ್ಲೇ ಇವರು ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಮಾನಸಿಕ ಖಿನ್ನತೆಯಿಂದಾಗಿ ಅನಾಹುತ ನಡೆದಿದೆ ಎನ್ನಲಾಗ್ತಿದೆ.