ನವದೆಹಲಿ: ಪ್ರತಿಪಕ್ಷಗಳ ಸಾಕಷ್ಟು ವಿರೋಧದ ನಡುವೆಯೂ ನಡೆದ ಸತತ 9 ಗಂಟೆಗಳ ಚರ್ಚೆಗಳ ಬಳಿಕ ಪೌರತ್ವ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.
ಆಯ್ಕೆ ಸಮಿತಿಗೆ ಕಳುಹಿಸಲು ಪ್ರತಿಪಕ್ಷಗಳು ಕೈಗೊಂಡ ನಿರ್ಣಯವನ್ನು ಸದನ ತಿರಸ್ಕಾರದ ಬಳಿಕವೂ ಮಸೂದೆ ತಿದ್ದುಪಡೆಗೆ ಕಾನೂನು ರೂಪಿಸುವ ನಿರ್ಧಾರವನ್ನ ಕೇಂದ್ರ ಸರ್ಕಾರ ಮಾಡಿದೆ. ಇದಕ್ಕೆ ಪ್ರತಿ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿವೆ.
ಈ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಈಶಾನ್ಯದಲ್ಲಿ ತೀವ್ರ ಪ್ರತಿಭಟನೆಗಳು ನಡೆದಿವೆ. ಹಿಂಸಾರೂಪ ಪಡೆದುಕೊಂಡಿದೆ. ಆಸ್ಸಾಂನ ಗುವಾಹಿತಿ, ದಿಬ್ರಗಡ ಜೊಹ್ರತ್ ನಲ್ಲಿ ಸಾಕಷ್ಟು ಹಿಂಸಾಚಾರ ಪಡೆದುಕೊಂಡಿದೆ. ತ್ರಿಪುರಾದಲ್ಲಿಯೂ ಗದ್ದಲ ಗಲಾಟೆ ಜೋರಾಗಿದೆ.