ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ತಮಗೆ ಬೇಕಾದ ಸಚಿವ ಸ್ಥಾನ ಸಿಗಲಿಲ್ಲ ಅನ್ನೋ ಕಾರಣಕ್ಕೆ ಮೊದಲಿನಿಂದ ಅಸಮಧಾನ ಹೊರ ಹಾಕುತ್ತಿದ್ದ ಸಚಿವ ಆನಂದ್ ಸಿಂಗ್, ಇದೀಗ ರಾಜೀನಾಮೆಯಿಂದ ಹಿಂದಕ್ಕೆ ಸರಿದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆಗಿನ ಚರ್ಚೆ ಬಳಿಕ ಆನಂದ್ ಸಿಂಗ್ ರಾಜಿಯಾಗಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾತ್ನಾಡಿರುವ ಸಚಿವ ಆನಂದ್ ಸಿಂಗ್, ನಾನು ಸಿಎಂ ಭೇಟಿ ಮಾಡಿ ಚರ್ಚಿಸಿದ್ದೇನೆ. ನನ್ನ ಬೇಡಿಕೆಯನ್ನ ಸಿಎಂ ಮುಂದೆ ಇಟ್ಟಿದ್ದೇನೆ. ಅವರು ಮನವಿ ಪರಗಣಿಸುತ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗಿ ಸಚಿವನಾಗಿ ಮುಂದುವರೆಯಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.