5 ಬಾರಿ ಸಿಎಂ ಆಗಿದ್ದ ಬಾದಲ್ ಸೇರಿ ಘಟಾನುಘಟಿ ನಾಯಕರ ಸೋಲು

543

ಪ್ರಜಾಸ್ತ್ರ ಸುದ್ದಿ

ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಪ್ ಎಲ್ಲ ಪಕ್ಷಗಳನ್ನು ಧೂಳಿಪಟ ಮಾಡಿದೆ. ಪೊರಕೆ ಹೊಡೆತಕ್ಕೆ ಐದು ಬಾರಿ ಸಿಎಂ ಆಗಿದ್ದ ಬಾದಲ್ ಸೇರಿ ಘಟಾನುಘಟಿ ನಾಯಕರು ಸೋಲು ಅನುಭವಿಸಿದ್ದಾರೆ.

ಲಂಬಿ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ವಿರುದ್ಧ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಸೋಲು ಅನುಭವಿಸಿದ್ದಾರೆ. ಪ್ರಸ್ತುತ ಸಿಎಂ ಆಗಿದ್ದ ಚರಣಜೀತ್ ಸಿಂಗ್ ಚಿನ್ನಿ, ಮಾಜಿ ಸಿಎಂ ಅವರೀಂದ್ರ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಥಿಯಾ ಸೇರಿ ದೊಡ್ಡ ದೊಡ್ಡ ನಾಯಕರು ಸೋಲು ಅನುಭವಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!