ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಡಿಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಬಿಎಸ್ವೈ ಶಾಕ್ ನೀಡಿದ್ದಾರೆ ಎನ್ನಲಾಗ್ತಿದೆ. ಈಗಿರುವ ಆರೋಗ್ಯ ಖಾತೆಯನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ ಅವರಿಗೆ ನೀಡಲಾಗ್ತಿದೆ ಅನ್ನೋದು ತಿಳಿದು ಬಂದಿದೆ.
ಹೀಗೆ ದಿಢೀರ್ ಎಂದು ಖಾತೆ ಬದಲಾವಣೆ ಮಾಡಿದ್ರೆ ಜನರಿಗೆ ತಪ್ಪು ಸಂದೇಶ ಹೋಗುತ್ತೆ. ನಾನು ಏನೂ ಕೆಲಸ ಮಾಡಿಲ್ಲ ಎಂದುಕೊಳ್ಳುತ್ತಾರೆ. ಸಂಪುಟ ಪುನರ್ ರಚನೆ ಸಮಯದಲ್ಲಿ ಖಾತೆ ಬದಲಾವಣೆ ಮಾಡಿದ್ರೆ ಒಳ್ಳೆಯದು. ಆದ್ರೆ, ಈ ಬಗ್ಗೆ ನನ್ಗೆ ಮಾಹಿತಿ ಇಲ್ಲ. ಸಿಎಂ ಭೇಟಿ ಮಾಡಿ ಚರ್ಚಿಸುತ್ತೇನೆಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ವೈದ್ಯಕೀಯ ಖಾತೆಯ ಜೊತೆಗೆ ಆರೋಗ್ಯ ಖಾತೆ ಸಹ ಒಬ್ಬರ ಬಳಿಯಿದ್ರೆ ಒಳ್ಳೆಯದು ಅನ್ನೋ ವಿಚಾರವನ್ನ ಸಚಿವ ಡಾ.ಕೆ ಸುಧಾಕರ ಪ್ರಸ್ತಾಪ ಮಾಡಿದ್ದರಂತೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಖಾತೆಯ ಜೊತೆಗೆ ಆರೋಗ್ಯ ಖಾತೆಯನ್ನ ಸಹ ಸುಧಾಕರಗೆ ನೀಡಲು ಸಿಎಂ ಮುಂದಾಗಿದ್ದಾರೆ ಎನ್ನಲಾಗ್ತಿದೆ.