ಯಡಿಯೂರಪ್ಪ ಬಹಳ ದಿನ ಸಿಎಂ ಆಗಿರಲ್ಲ: ಯತ್ನಾಳ

430

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಯಡಿಯೂರಪ್ಪ ಬಹಳ ದಿನ ಸಿಎಂ ಆಗಿ ಉಳಿವುದಿಲ್ಲವೆಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಕೇಂದ್ರ ಸರ್ಕಾರಕ್ಕೂ, ಹೈಕಮಾಂಡ್ ನಾಯಕರಿಗೂ ಯಡಿಯೂರಪ್ಪ ಸಾಕಾಗಿ ಹೋಗಿದ್ದಾರೆ ಎಂದು ಸ್ವಪಕ್ಷದ ಶಾಸಕರೆ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ನಗರದ ವಾರ್ಡ್ ನಂಬರ್ 3ರಲ್ಲಿ ಹನುಮಂತ ದೇವಸ್ಥಾನದ ಕಾಂಪೌಂಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ್ನಾಡಿದ ಅವರು, ಮುಂದಿನ ಸಾರಿ ಉತ್ತರ ಕರ್ನಾಟಕದವರೆ ಸಿಎಂ ಆಗುತ್ತಾರೆ. ಉತ್ತರ ಕರ್ನಾಟಕದಿಂದ 100 ಜನ ಶಾಸಕರು ಗೆದ್ದು ವಿಧಾನಸೌಧಕ್ಕೆ ಕಳುಹಿಸಿದ್ರೆ, ಉಳಿದ ಭಾಗದಲ್ಲಿ 15 ಜನ ಗೆದ್ದು ಅವರಲ್ಲೆ ಸಿಎಂ ಆಗ್ತಾರೆ ಎಂದು ಕಿಡಿ ಕಾರಿದ್ದಾರೆ.

ಈ ಭಾರಿ ಉತ್ತರ ಕರ್ನಾಟಕದವರಿಗೆ ಸಿಎಂ ಮಾಡ್ತೀವಿ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಈಗಾಗ್ಲೇ ನನ್ನ ಹಾಗೂ ಸಿಎಂ ನಡುವೆ ಜಗಳ ಶುರುವಾಗಿದೆ. ನನ್ನ ಮತಕ್ಷೇತ್ರದ 125 ಕೋಟಿ ರೂಪಾಯಿ ಅನುದಾನ ಕಡಿತ ಮಾಡಿದ್ದು, ಒಮ್ಮೆ ಜಗಳವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!