ಸಂಕ್ರಾಂತಿಗಿಲ್ಲ ಮಂತ್ರಿಗಿರಿ ಎಳ್ಳು ಬೆಲ್ಲ

346

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರನ್ನ ಭೇಟಿಯಾಗಲು ಸಮಯ ಇನ್ನೂ ಕೂಡಿ ಬರ್ತಿಲ್ಲ. ಹೀಗಾಗಿ ಪದೆಪದೆ ದೆಹಲಿ ಪ್ರವಾಸ ಕ್ಯಾನ್ಸಲ್ ಆಗ್ತಿದೆ. ಇದ್ರಿಂದಾಗಿ ಮಂತ್ರಿಗಿರಿ ಕನಸು ಕಾಣ್ತಿರುವ ನೂತನ ಶಾಸಕರಿಗೆ ನಿರಾಸೆಯಾಗ್ತಿದೆ.

ಅಮಿತ ಶಾ ಟೈಂ ನೀಡಿದ್ರೆ ಎಲ್ಲ ಕಾರ್ಯಕ್ರಮಗಳನ್ನ ರದ್ದು ಮಾಡಿ ದೆಹಲಿಗೆ ತೆರಳುವುದಾಗಿ ಸಿಎಂ ಬೆಳಗ್ಗೆಯಷ್ಟೇ ಹೇಳಿದ್ರು. ಆದ್ರೆ, ಇದೀಗ ಅವರು ಚಿಕ್ಕಮಗಳೂರು, ದಾವಣಗೆರೆ ಹಾಗೂ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಸೊಲ್ಲಾಪುರದಲ್ಲಿ ನಡೆಯುವ ಗುರು ಸಿದ್ದರಾಮ ಶಿವಯೋಗಿಗಳ ಜಯಂತಿಯಲ್ಲಿ ಭಾಗವಹಿಸ್ತಿದ್ದಾರೆ.

ಸೊಲ್ಲಾಪುರದಿಂದ ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಬಂದು ಅಲ್ಲಿ ನಡೆಯುವ ಬೆಳ್ಳಿ ಬೆಡಗು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಾದ್ಮೇಲೆ ಸ್ವಕ್ಷೇತ್ರ ಶಿಕಾರಿಪುರಕ್ಕೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ದಾವಣಗೆರೆಗೆ ಬಂದು ಅಲ್ಲಿಂದ ಹಾವೇರಿಗೆ ಆಗಮಿಸ್ತಿದ್ದಾರೆ. ಇಲ್ಲಿ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸ್ತಿದ್ದಾರೆ. ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ.

ಹೀಗೆ ಬಿಎಸ್ವೈ ಕಾರ್ಯಕ್ರಮವಿದ್ದು, ದೆಹಲಿಗೆ ಹೋಗೋದು ಡೌಟ್. ಯಾಕಂದ್ರೆ, ಅಮಿತ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದು, ಜನವರಿ 18ರಂದು ಕರ್ನಾಟಕಕ್ಕೆ ಬರ್ತಿದ್ದಾರೆ. ಅವರ ನಿಗಿದಿತ ಕಾರ್ಯಕ್ರಮ ಮುಗಿದ್ಮೇಲೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಅನ್ನೋದು ತಿಳಿದು ಬಂದಿದೆ. ಹೀಗಾಗಿ ಸಂಕ್ರಾಂತಿಗೆ ಸಚಿವರಾಗಬೇಕೆಂದುಕೊಂಡವರಿಗೆ ನಿರಾಸೆಯಾಗಿದೆ. ಬಿಜೆಪಿ ಯಾವಾಗ ಡೇಟ್ ನೀಡುತ್ತೋ ಅನ್ನೋದು ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!