ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪನವರು ಇಂದು ಹಾಗೂ ನಾಳೆ ವಿಜಯಪುರ ಮತ್ತು ಬಳ್ಳಾರಿ ಪ್ರವಾಸ ನಿಗದಿಯಾಗಿತ್ತು. ಆದ್ರೆ, ಇದೀಗ ಕೊನೆಯ ಕ್ಷಣದಲ್ಲಿ ಅದು ಕ್ಯಾನ್ಸಲ್ ಆಗಿದೆ. ಜನವರಿ 16 ಹಾಗೂ 17ರಂದು ಈ ಎರಡು ಜಿಲ್ಲೆಗಳ ಪ್ರವಾಸ ನಿಗದಿ ಮಾಡಲಾಗಿತ್ತು.
ಕೆಲವೊಂದು ತಾಂತ್ರಿಕ ಕಾರಣ ಹಾಗೂ ಅನಿವಾರ್ಯ ಕಾರಣಗಳಿಂದ ವಿಜಯಪುರ ಜಿಲ್ಲೆಯ ಪ್ರವಾಸವನ್ನ ರದ್ದು ಮಾಡಲಾಗಿದೆ. ಈ ಬಗ್ಗೆ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಉಪ ಕಾರ್ಯದರ್ಶಿ ಬಿ.ಪಿ ಚನ್ನಬಸವೇಶ್ವರ ತಿಳಿಸಿದ್ದಾರೆ.