ಪ್ಯಾಕೇಜ್ ಘೋಷಿಸದೆ ರಿಪೋರ್ಟ್ ಕಾರ್ಡ್ ಒಪ್ಪಿಸಿದ ಸಿಎಂ

286

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ್ರು. ಸಿಎಂ ಸುದ್ದಿಗೋಷ್ಠಿ ವೇಳೆ ರಾಜ್ಯದ ಜನತೆಗೆ ವಿಶೇಷ ಪ್ಯಾಕೇಜ್ ಏನಾದ್ರೂ ಘೋಷಣೆ ಮಾಡ್ತಾರೆ ಎಂದು ಕಾದುಕೊಂಡು ಕುಳಿತಿದ್ದವರಿಗೆ ನಿರಾಸೆಯಾಗಿದೆ. ಸಿಎಂ ಯಡಿಯೂರಪ್ಪ ಕೇವಲ ರಿಪೋರ್ಟ್ ಕಾರ್ಡ್ ಒಪ್ಪಿಸಿ ಹೋದರು.

18-44 ವಯಸ್ಸಿನವರ ಲಸಿಕೆ ಮುಂದೂಡಿಕೆ ಬಗ್ಗೆ ಹೇಳಿದ ಸಿಎಂ, ಲಾಕ್ ಡೌನ್ ಪೂರ್ವದಲ್ಲಿದ್ದ ಬರ್ತಿದ್ದ ಸೋಂಕಿತರ ಸಂಖ್ಯೆ ಹಾಗೂ ಲಾಕ್ ಡೌನ್ ನಂತರದಲ್ಲಿ ಬರ್ತಿರುವ ಸಂಖ್ಯೆಯ ತಿಳಿಸಿದ್ರು. ಇದರ ಜೊತೆಗೆ ಕೋವಿಡ್ ನಿಯಂತ್ರಣದ ಬಗ್ಗೆ ಒಂದಿಷ್ಟು ಮಾತ್ನಾಡಿದ್ರು.

ಸಚಿವರುಗಳು ಮಾಡಿದ ಕೆಲಸವನ್ನು ವಿವರಿಸಿ ಸುಮ್ಮನಾದ ಯಡಿಯೂರಪ್ಪನವರಿಂದ ಸುದ್ದಿಗೋಷ್ಠಿ ಮೇಲಿನ ನಿರೀಕ್ಷೆ ಹುಸಿಯಾಗಿ ಹೋಯ್ತು. ಚಾಮರಾಜನಗರದ ಮೃತರ ಕುಟುಂಬಗಳಿಗೆ ಪರಿಹಾರದ ಬಗ್ಗೆ ಚಕಾರ ಇಲ್ಲ. ಮನೆಯಲ್ಲಿ ಕುಳಿತಿರುವ ಕಾರ್ಮಿಕರ ಬಗ್ಗೆ ಮಾತಿಲ್ಲ.  ದಿನೇ ದಿನೇ ಹೆಚ್ಚುತ್ತಿರುವ ಆಕ್ಸಿಜನ್ ಬೆಡ್ ಬೇಡಿಕೆ, ವ್ಯಾಕ್ಸಿನ್ ಕೊರತೆ ಬಗ್ಗೆಯೂ ಸಿಎಂ ಮಾತ್ನಾಡ್ಲಿಲ್ಲ. ಹೀಗಾಗಿ ಇದೊಂದು ರಿಪೋರ್ಟ್ ಕಾರ್ಡ್ ಸುದ್ದಿಗೋಷ್ಠಿ ಆಗಿ ಹೋಯ್ತು.




Leave a Reply

Your email address will not be published. Required fields are marked *

error: Content is protected !!