ನಿಮ್ಗೆ ಕಡಿ, ಬಡಿ ಬಿಟ್ರೆ ಬೇರೇನೂ ಗೊತ್ತಿಲ್ವಾ?: ಈಶ್ವರಪ್ಪ ವಿರುದ್ಧ ಸಿಎಂ ಕಿಡಿ

146

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಇದು ಹೀಗೆ ಮುಂದುವರೆದರೆ ಪ್ರತ್ಯೇಕ ದೇಶದ ಬೇಡಿಕೆ ಇಡಬೇಕಾಗುತ್ತೆ ಎಂದು ಹೇಳಿದ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಬಿಜೆಪಿ ಮಾಜಿ ಸಚಿವ ಈಶ್ವರಪ್ಪ, ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈಶ್ವರಪ್ಪ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರೀ ಈಶ್ವರಪ್ಪನವರೇ ನಿಮ್ಗೆ ಕಡಿ, ಬಡಿ ಬಿಟ್ರೆ ಬೇರೇನೂ ಗೊತ್ತಿಲ್ವಾ? ಆರ್ ಎಸ್ಎಸ್ ಟ್ರೇನಿಂಗ್ ಆಗಿದೆ ಇಂತೀರಾ? ಇದೇನಾ ಆಗಿರುವುದು ಎಂದರು. ಕೊಲ್ಲು, ಕತ್ತರಿಸು ಭಾಷೆ ಬಿಟ್ಟು ಬಿಜೆಪಿಗೆ ಬೇರೆ ಬರಲ್ಲ. ಈಶ್ವರಪ್ಪ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.




Leave a Reply

Your email address will not be published. Required fields are marked *

error: Content is protected !!