ಬಿಎಸ್ವೈ ವಿರುದ್ಧ ಸಿಪಿವೈ ಬಹಿರಂಗ ವಾಗ್ದಾಳಿ

266

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಕಾವು ಜೋರಾಗಿದೆ. ಇದರ ಮೂಲಕ ಸಚಿವ ಸಿ.ಪಿ ಯೋಗೇಶ್ವರ ಅನ್ನೋ ಮಾತುಗಳು ಕೇಳಿ ಬರ್ತಿದೆ. ಈ ಬಗ್ಗೆ ಮಾತ್ನಾಡಿರುವ ಸಿಪಿವೈ, ನನ್ನ ಅಧಿಕಾರದಲ್ಲಿ ನನ್ನ ಮಗ ಮೂಗು ತೂರಿಸಿದ್ರೆ ಸರಿಯಲ್ಲ ಅದು. ಆದ್ರೆ, ರಾಜ್ಯದಲ್ಲಿ ಅದೆ ನಡೀತಿರೋದು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿಎಂ ಬಿಎಸ್ವೈ ಹಾಗೂ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕಿಡಿ ಕಾರಿದ್ದಾರೆ.

ನಾನೊಬ್ಬ ಸಚಿವ. ನನ್ನ ಅಧಿಕಾರದಲ್ಲಿ ಮತ್ತೊಬ್ಬರು ಮೂಗು ತೂರಿಸುವುದು ಇಷ್ಟವಿಲ್ಲ. ಇದನ್ನೇ ಹೈಕಮಾಂಡ್ ಗೆ ಸೂಕ್ಷ್ಮವಾಗಿ ಹೇಳಿದ್ದೇನೆ. ಪಕ್ಷದ ಕೆಲ ಸ್ನೇಹಿತರು ನನ್ನ ಬಗ್ಗೆ ಮಾತ್ನಾಡಿದ್ದಾರೆ. ಅದಕ್ಕೆ ಯಾರ ಕುಮ್ಮಕ್ಕು ಇದೆ ಅನ್ನೋದು ಗೊತ್ತು ಎಂದಿದ್ದಾರೆ.

ದೆಹಲಿಗೆ ನಾನು ಹೋಗಿ ಬರ್ತಿರುತ್ತೇನೆ. ನನ್ನ ಕೆಲ ನೋವುಗಳನ್ನ ಹೈಕಮಾಂಡ್ ಮುಂದೆ ಹಂಚಿಕೊಂಡಿದ್ದೇನೆ. ಬೇರೆಯವರ ಮೇಲೆ ನಾನು ಆರೋಪ ಮಾಡಿಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನ್ಗೆ ಗೊತ್ತಿಲ್ಲ. ಆ ಶಕ್ತಿ ನನಗಿಲ್ಲ ಎಂದು ಹೇಳುವ ಮೂಲಕವೇ ಮುಖ್ಯಮಂತ್ರಿ ಬಿಎಸ್ವೈ ಹಾಗೂ ಬಿ.ವೈ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!