ಪ್ರಜಾಸ್ತ್ರ ಅಪರಾಧ ಸುದ್ದಿ
ಮುಜಾಫರನಗರ: ಕಾಮಾತುರಾಣಾಂ ನ ಭಯಂ ನ ಲಜ್ಜಾಃ ಅನ್ನೋ ಮಾತು ಸಂಸ್ಕೃತದಲ್ಲಿದೆ. ಕಾಮದ ಆತುರದಲ್ಲಿದವರಿಗೆ ಭಯ, ಮರ್ಯಾದೆ ಅನ್ನೋದೆ ಇರೋದಿಲ್ಲ. ಆ ಹೊತ್ತಿನಲ್ಲಿ ಏನು ಮಾಡುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಇಲ್ಲೊಬ್ಬ ಕ್ರೂರಿ, ಲೈಂಗಿಕ ಕ್ರಿಯೆಗೆ ಒಪ್ಪದ ಹೆಂಡ್ತಿ ಸೇರಿದಂತೆ 3 ಪುಟ್ಟ ಮಕ್ಕಳನ್ನ ಕೊಂದಿದ್ದಾನೆ.
ಉತ್ತರ ಪ್ರದೇಶದ ಮುಜಾಫರನಗರದ ಬೇಸಿಂಡಿ ಗ್ರಾಮದಲ್ಲಿ ಇಂತಹದೊಂದು ದುರಂತ ನಡೆದಿದೆ. ಪಪ್ಪುಕುಮಾರ ಅನ್ನೋ ಪಾಪಿ, ಪತ್ನಿ ಡಾಲಿ, ವನ್ಯ(3), ಸೋನಿಯಾ(5) ಹಾಗೂ ಹರ್ಷಿತಾ(15 ತಿಂಗಳು) ಅನ್ನೋ ಮಗು ಸೇರಿದಂತೆ ನಾಲ್ವರನ್ನ ಹತ್ಯೆ ಮಾಡಿದ್ದಾನೆ.
ಪತ್ನಿ ಡಾಲಿ ಅನ್ನು ಗುಂಡಿಕ್ಕಿ ಕೊಲೆ ಮಾಡಿದ ಪಪ್ಪುಕುಮಾರ ಬಳಿಕ ಮೂರು ಮಕ್ಕಳನ್ನ ನಾಲೆಗೆ ಎಸೆದಿದ್ದಾನೆ. ಇದೀಗ ಹಂತಕ ಪುಪ್ಪಕುಮಾರನನ್ನ ಪುರ್ಕಾಜಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಮೃತದೇಹ ಇನ್ನು ಪತ್ತೆಯಾಗಿಲ್ಲ. ಪತ್ನಿಯ ಅಂತ್ಯ ಸಂಸ್ಕಾರ ಮಾಡಲಾಗಿದೆ. ಇಂತಹ ಮನುಷ್ಯ ರೂಪದ ರಾಕ್ಷಸರು ಇನ್ನೂ ಭೂಮಿ ಮೇಲೆ ಇರುವುದೆ ದುರಂತ.